ಕಲಘಟಗಿ/ಧಾರವಾಡ) : ಭತ್ತದ ಕಣಜ, ತೊಟ್ಟಿಲ ನಗರಿ, ಕಲ್ಲು ಕಟ್ಟಿಗೆಯ ನಾಡು ಎಂದೆ ಪ್ರಸಿದ್ಧಿ ಪಡೆದಿರುವ ಕಲಘಟಗಿಗೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಥಯಾತ್ರೆಗೆ ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಕನ್ನಡ ಪರ ಅಭಿಮಾನಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು ಬಮ್ಮಿಗಟ್ಟಿ ಸರ್ಕಲ್ ನಲ್ಲಿ ಸಮ್ಮೇಳನದ ರಥದಲ್ಲಿನ ಕನ್ನಡದ ತಾಯಿ ಶ್ರೀ ಭುವನೇಶ್ವರಿ ಮೂರ್ತಿಗೆ ಅದ್ದೂರಿ ಪೂಜೆಯ ಮುಖಾಂತರ ಭವ್ಯವಾಗಿ ಸ್ವಾಗತ ಕೋರಿದರು.
ಕಲಾತಂಡದವರಿಂದ ಡೊಳ್ಳು ಮೆರವಣಿಗೆ ಮುಖಾಂತರ ಸಂಚರಿಸಿ. ಕಸಾಪ ಜಿಲ್ಲಾ ಅಧ್ಯಕ್ಷ ಡಾ: ಲಿಂಗರಾಜ್ ಅಂಗಡಿ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ನಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ಜರುಗಲಿದ್ದು ಜಿಲ್ಲೆಯ ವಿವಿಧ ತಾಲೂಕಿನ ಕನ್ನಡ ಪರ ಅಭಿಮಾನಿಗಳು ಭಾಗವಹಿಸಬೇಕೆಂದು ಹೇಳಿದರು. ಕನ್ನಡ ಭಾಷೆ ಉಳಿಸಲಿಕ್ಕಾಗಿ ಸಾಕಷ್ಟು ಚಳುವಳಿಗಳು, ಹೋರಾಟ, ಮಾಡುವ ಮುಖಾಂತರ ಸಾಕಷ್ಟು ಕವಿಗಳು ಸಾಹಿತಿಗಳು ವಿಮರ್ಶಕರು ಕನ್ನಡದ ಸಾಹಿತ್ಯವನ್ನು ಪರಿಚಯಿಸುವ ಮುಖಾಂತರ ಕನ್ನಡಕ್ಕೆ ಸಾಕಷ್ಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿದ್ದು ಕನ್ನಡಕ್ಕೆ ಅದರದೇ ಆದಂತಹ ಅದ್ಭುತವಾದ ಶಕ್ತಿ ಇದೆ ಈ ನಮ್ಮ ಇತಿಹಾಸ ಪರಂಪರೆಯನ್ನು ನಾವೆಲ್ಲರೂ ಉಳಿಸಿ ಬೆಳೆಸೋಣ ಎಂದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ವೀರೇಶ ಮುಳಗುಂದಮಠ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಿವಿ ಕುಲಕರ್ಣಿ, ಸಿ ಪಿ ಐ ಶ್ರೀಶೈಲ ಕೌಜಲಗಿ, ಬಸವರಾಜ್ ಯದ್ದಲಗುಡ್ಡ,ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಶಾಸಕರ ಆಪ್ತ ಕಾರ್ಯದರ್ಶಿ ಹರಿಶಂಕರ್ ಮಠದ, ಸೋಮಶೇಖರ್ ಬೆನ್ನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮುರಳ್ಳಿ, ಬಾಳು ಖಾನಾಪುರ, ಯುವ ಮುಖಂಡ ಪ್ರಮೋದ್ ಪಾಲ್ಕರ,ಪ ಪಂ. ಉಪಾಧ್ಯಕ್ಷ ಗಂಗಾಧರ ಗೌಳಿ, ಬಸವರಾಜ್ ಕಡ್ಲಾಸ್ಕರ್, ಕೃಷ್ಣ ತಾಸಿಲ್ದಾರ್, ಕಾರ್ಮಿಕ ನಿರೀಕ್ಷಕರು ಲತಾ ಟಿಎಸ, ಶ್ರೀಧರ್ ಪಾಟೀಲ್ ಕುಲಕರ್ಣಿ, ಎಸ್ ಎ ಚಿಕ್ಕನರ್ತಿ,ವಿಜಿ ಅಂಗಡಿ, ರವೀಂದ್ರ ತೋಟಗಂಟಿ, ಶಂಕರಗೌಡ ಬಾವಿಕಟ್ಟಿ, ಎಸ್ ವಿ ತಡಸಮಠ, ಐ ಸಿ ಗೋಕುಲ್, ಸುಧೀರ್ ಬೋಳಾರ್, ಸೋಮಲಿಂಗ ಒಡೆಯರ್, ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಕನ್ನಡ ಪರ ಅಭಿಮಾನಿಗಳು ಉಪಸ್ಥಿತರಿದ್ದರು.