ಗದಗ: ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ವಡ್ಡಿನ ಹಳ್ಳದಲ್ಲಿ ಇಬ್ಬರು ಯುವಕರು ಕೊಚ್ಚಿ ಹೋದ ಘಟನೆ ಹುಣಸಿಕಟ್ಟಿ ಬಳಿ ನಡೆದಿದೆ. ಶಿವಪ್ಪ ಅಶೋಕಪ್ಪ ಅವರಾದಿ (25) ಮಣಿಕಂಠ ಅಶೋಕ ಮಲ್ಲಾಪೂರ (26) ನೀರು ಪಾಲಾದ ಯುವಕರಾಗಿದ್ದು, ಶಿವಪ್ಪ ಅಶೋಕಪ್ಪ ಅವರಾದಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಮಣಿಕಂಠನಿಗಾಗಿ ಶೋಧ ನಡೆಯುತ್ತಿದೆ.
Post Office Scheme: ಅಂಚೆ ಕಚೇರಿಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ 10 ವರ್ಷದಲ್ಲಿ ನಿಮ್ಮ ಹಣ ಡಬಲ್!
ನಿನ್ನೆ ರಾತ್ರಿ ಹುಣಸಿಕಟ್ಟಿಯಿಂದ ನರಗುಂದಕ್ಕೆ ಮಣಿಕಂಠ ಹಾಗೂ ಗೆಳೆಯ ಹೋಗಿದ್ದರು. ಗದಗ ಜಿಲ್ಲೆಯ ಹಲವಡೆ ರಾತ್ರಿ ಭಾರಿ ಮಳೆ ಹಿನ್ನೆಲೆ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಒಡ್ಡಿ ಹಳ್ಳದಲ್ಲಿ ಕೊಚ್ಚಿ ಹೋಗಿ ಅವಘಡ ಸಂಭವಿಸಿದೆ. ಪೊಲೀಸ್, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.