ಬೀದರ್:- ಮಹಿಳಾ PSI ಮೇಲೆ ಹಲ್ಲೆ ಮಾಡಿದ ಆರೋಪದಡಿ ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಲಾಗಿದೆ.
ಮಹಿಳಾ ಠಾಣೆ ಪಿಎಸ್ಐ ಮಲ್ಲಮ್ಮ ಮೇಲೆ ಹಲ್ಲೆ ಮಾಡಿ ಅಶಿಸ್ತಿನ ವರ್ತನೆ ತೊರಿದ ಹಿನ್ನಲೆಯಲ್ಲಿ ನ್ಯೂಟೌನ್ ಠಾಣೆಯ ಕಾನ್ಸ್ಟೆಬಲ್ ಧನರಾಜ್ನನ್ನು ಅಮಾನತುಗೊಳಿಸಿ ಎಸ್ಪಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ.
ತಿಮ್ಮಪ್ಪನ ಲಡ್ಡು ವಿವಾದ: ಕರ್ನಾಟಕದ ದೇವಸ್ಥಾನಗಳ ದಾಸ್ತಾನು ಗೃಹದಲ್ಲಿ ಸಿಸಿಟಿವಿ ಕಡ್ಡಾಯ!
ಕೆಇಎ ಪರೀಕ್ಷೆ ಭದ್ರತಾ ಸಮಯದಲ್ಲಿ ಬಂದೋಬಸ್ತ್ಗೆ ಕಾನ್ಸ್ಟೇಬಲ್ ಧನರಾಜ್ ತಡಮಾಡಿ ಕೇಂದ್ರಕ್ಕೆ ಬಂದಿದ್ದನ್ನ ಪ್ರಶ್ನೆ ಮಾಡಿದ ಪಿಎಸ್ಐ ಮಲ್ಲಮ್ಮ ಮೇಲೆ ಕಾನಸ್ಟೇಬಲ್ ಗಂಬೀರವಾಗಿ ಹಲ್ಲೆ ಮಾಡಿದ್ದಾನೆ. ತಡ ಮಾಡಿ ಬಂದಿದ್ದಲ್ಲದೇ ಪ್ರಶ್ನೆ ಮಾಡಿದ ಪಿಎಸ್ಐ ಮಹಿಳೆ ಎಂಬುದನ್ನೂ ನೋಡದೆ ಕುತ್ತಿಗೆಯ ಭಾಗ ಹಿಡಿದು ಬೇವಿನ ಮರಕ್ಕೆ ಗುದ್ದಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.