ಬೆಂಗಳೂರು:- ಬೆಂಗಳೂರಿನ ರಾಜಗೋಪಾಲದ ಕಪಿಲಾನಗರದ 4ನೇ ಕ್ರಾಸ್ ಮನೆಯಲ್ಲಿ ಮನೆಯಲ್ಲಿ ಪಾರ್ಟಿ ಮಾಡ್ತಿದ್ದವರ ಮೇಲೆ ಅಟ್ಯಾಕ್ ನಡೆದಿದೆ.
ಯಾವುದೇ ಕಾರಣಕ್ಕೂ ಇಂತವರು ಬೆಂಡೆಕಾಯಿ ತಿನ್ನಲೇಬಾರದಂತೆ!? ಯಾರು, ಯಾಕೆ!?
ಮಚ್ಚು, ಲಾಂಗ್ಗಳಿಂದ 4-5 ಜನರ ಮೇಲೆ ಹಲ್ಲೆ ಮಾಡಿತ್ತು. ಅದೃಷ್ಟವಶಾತ್ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. ಆದರೆ ಇಂತ ಕೃತ್ಯ ಎಸಗಿದ್ದ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸದಾ ಶಾಂತವಾಗಿರುವ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿರುವ ಕಪಿಲಾ ನಗರ, ಕಳೆದ ಗುರುವಾರ ರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. 4ನೇ ಕ್ರಾಸ್ನ ಬಿಲ್ಡಿಂಗ್ನ 4ನೇ ಫ್ಲೋರ್ ಮನೆಯಲ್ಲಿ ಚಾಕು, ಲಾಂಗ್ ಝಳಪಿಸಿತ್ತು. ಇಬ್ಬರು ರೌಡಿಶೀಟರ್ಗಳ ಮಧ್ಯೆ ಇದ್ದಂತ ಹಳೇ ದ್ವೇಷ ತಾರಕ್ಕಕ್ಕೇರಿ ಒಬ್ಬನನ್ನ ಕೊಲೆ ಮಾಡಲು ಇನ್ನೊಬ್ಬ ವಿಫಲ ಯತ್ನ ನಡೆಸಿದ್ದ.
ಯೆಸ್. ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ಗಳಾದ ನರೇಂದ್ರ ಅಲಿಯಾಸ್ ದಾಸ ಮತ್ತು ರಮೇಶ್ ಅಲಿಯಾಸ್ ಬಳಿಲು ಮಧ್ಯೆ ಕೆಲ ವರ್ಷಗಳಿಂದ ದ್ವೇಷ ಇತ್ತು. ಆಗಾಗ ಜಗಳ ಆಗುತ್ತಿತ್ತು. ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ಆಗಿತ್ತು. ಹೀಗಿರೋವಾಗ ನರೇಂದ್ರ ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡುವಾಗ ರಮೇಶ್ ತನ್ನ ಸಹಚರರೊಂದಿಗೆ ದಾಳಿ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ. ಸದ್ಯ ಗಾಯಳು ನರೇಂದ್ರ ರಾಜಗೋಪಾಲ ನಗರ ಠಾಣೆಯಲ್ಲಿ ರಮೇಶ್ ಮತ್ತು ಟೀಂ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಿದ್ದಾನೆ.