ಬೆಳಗಾವಿ: ಹಿಂದೂಗಳಿಗೆ ಈ ದೇಶದಲ್ಲಿ ಗುಲಾಮಾರಾಗಿ ಜೀವನ ಮಾಡುವ ಪರಿಸ್ಥಿತಿಯಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹಿಂದೂಗಳು ಈ ದೇಶದಲ್ಲಿ ಗುಲಾಮಾರಾಗಿ ಜೀವನ ಮಾಡುವ ಪರಿಸ್ಥಿತಿಯಿದೆ. ನರೇಂದ್ರ ಮೋದಿ ದೇಶದ ಪ್ರಧಾನಿ ಆಗಿರದಿದ್ದರೆ, ನಮ್ಮನ್ನು ಅತ್ಯಂತ ನಿರ್ದಿಷ್ಟ ಪರಿಸ್ಥಿತಿಯಲ್ಲಿ ನೋಡಬೇಕಾಗುತ್ತಿತ್ತು.
ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿದವರು, ಕಲ್ಲು ಒಗೆದವರು ಅವರು. ಆದರೆ, 1 ರಿಂದ 32ವರೆಗೂ ಹಿಂದೂ ಯುವಕರು ಆರೋಪಿಗಳು. ಎ33ರಿಂದ ಅವರು. ತಿರುಪತಿ ಲಾಡುವಿನಲ್ಲಿ ದನ ಕೊಬ್ಬು, ಮೀನನ ಎಣ್ಣೆ ಹಾಕಿದರು. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿ ಇದ್ದಾಗ ತಿರುಪತಿ ಅಪವಿತ್ರ ಮಾಡಿದ್ದರು. ಇನ್ನೂ ನಮಗೆ ಬುದ್ಧಿ ಬಂದಿಲ್ಲ ಎಂದರು.
Condoms: ಸೆಕ್ಸ್ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು ಗೊತ್ತಾ..?
ನಾವು ಗ್ಯಾರಂಟಿ ಅಂದ ತಕ್ಷಣವೇ ವೋಟ್ ಹಾಕುತ್ತೇವೆ. ಎರಡು ಸಾವಿರ ಕೊಡುತ್ತಾರೆ ಅಂದ್ರೆ ವೋಟ್ ಹಾಕುತ್ತೇವೆ. ಹೀಗೆ ಮಾಡಿದರೆ ಹಿಂದೂಗಳೇ ಉಳಿಯುವುದಿಲ್ಲ. ಹಿಂದೂಗಳು ಎರಡು ಸಾವಿರಕ್ಕೆ ಹೋಗುತ್ತೀರಾ. ಲಕ್ಷ್ಮೀ ಅಕ್ಕಾ ನಿಮಗೆ ಎರಡು ಸಾವಿರದಲ್ಲೇ ಬರ್ಬಾದ್ ಮಾಡಿದರು. ಆದಷ್ಟು ಜಲ್ದಿ ನಿಮಗೆ ಚಾಂದಬೇಬಿ ಮಾಡ್ತಾಳೆ ಎಂದು ಸಚಿವೆ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ಮಾಡಿದರು.