ಕೋಲಾರ: ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದ್ದು ಎರಡು ವಾರದಲ್ಲಿ ಸೊಸೈಟಿಯ ವತಿಯಿಂದ ಔಷಧಿ ಕೇಂದ್ರವನ್ನು ಪ್ರಾರಂಭಿಸಿ ರೈತರಿಗೆ ಹಾಗೂ ಷೇರುದಾರರಿಗೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿ ಮುಂದಾಗಿರುವುದಾಗಿ ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ವಿ.ರಾಮು ಅವ್ರು ತಿಳಿಸಿದರು.
Bengaluru Power Cut: ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ!
ನಗರದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಮತ್ತು ಜನತಾ ಬಜಾರ್ ನಿಯಮಿತದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಹಕಾರಿ ಸಂಘದಲ್ಲಿ ರಾಜಕಾರಣ ಮಾಡದೇ ಪಕ್ಷಾತೀತವಾಗಿ ರೈತರಿಗೆ ರಸಗೊಬ್ಬರಗಳ ವಿತರಣೆಯ ಜೊತೆಗೆ ಸಾರ್ವಜನಿಕರಿಗೆ ಅಕ್ಕಿ ವಿತರಣೆಯ ಮೂಲಕ ಅವಿಭಜಿತ ಕೋಲಾರ ಜಿಲ್ಲೆಗೆ ಮಾದರಿ ಸೊಸೈಟಿಯಾಗಿ ಮಾಡಿದ್ದೇವೆ ಮುಂದೆ ಔಷಧೀ ಕೇಂದ್ರ ಪ್ರಾರಂಭಿಸಿ ಕಡಿಮೆ ಬೆಲೆಗೆ ಔಷಧೀ ದೊರೆಯುವಂತೆ ಮಾಡಲಾಗುತ್ತದೆ ಈ ವರ್ಷವು ಸೊಸೈಟಿ 16.53 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸೊಸೈಟಿಯ ಕಟ್ಟಡವು ಹಳೆಯದಾಗಿದ್ದು ನೂತನ ಕಟ್ಟಡವನ್ನು ಸುಸಜ್ಜಿತವಾದ ನಿರ್ಮಿಸಿ ರೈತರಿಗೆ ಮತ್ತು ಷೇರುದಾರರಿಗೆ ಅನುಕೂಲ ಕಲ್ಪಿಸುವ ಜತೆಗೆ ಮತ್ತಷ್ಟು ಆಧುನಿಕ ಸ್ಪರ್ಶ ನೀಡಲು ಸಂಘವು ಮುಂದಾಗಿದ್ದು ಇದಕ್ಕೆ ಮೂರು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಆದಷ್ಟು ಬೇಗ ಜಾಗವನ್ನು ಪಡೆದು ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಸಭೆಯಲ್ಲಿ ತಿಳಿಸಿದರು,