ಕೋಲಾರ : ಕೋಲಾರ ಜಿಲ್ಲೆಯಲ್ಲಿ ನೀರಿನ ಹಕ್ಕಿಗಾಗಿ ಮತ್ತು ರೈತರ ಹಕ್ಕಿಗಾಗಿ ಹೋರಾಟ ಪ್ರಾರಂಭವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜ್ ಕರೆ ನೀಡಿದರು.
Crime News: ಬುದ್ಧಿ ಹೇಳಿದ ಮಹಿಳೆಗೆ ಮನೆಗೆ ನುಗ್ಗಿ ಚಾಕು ಹಾಕಿದ ಭೂಪ!
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ರೈತ ಹಕ್ಕೊತ್ತಾಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು. ನೀರಾವರಿ ಯೋಜನೆಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಬಯಲುಸೀಮೆಗೆ ಹರಿಯಬೇಕು. ಸರ್ಕಾರ ರೂಪಿಸುವ ನೀರಾವರಿ ಯೋಜನೆಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದರೆ ಯೋಜನೆಗಳು ನ್ಯಾಯಯುತವಾಗಿರಬೇಕು ಎಂದರು. ಸರ್ಕಾರದ ನಿಷ್ಠಾವಂತರಿಗೆ ಲಾಭ ಹಾಗೂ ರಾಜಕಾರಣಿಗಳಿಗೆ ಲಾಭ ಮಾಡಿಕೊಡಲು ಕೇವಲ ಪೈಪ್ ಲೈನ್ ಹಾಕುವತ್ತ ಸರ್ಕಾರದ ಗಮನವೇ ಹೊರತು ನೀರು ಕೊಡುವ ಉದ್ದೇಶವೇ ಇಲ್ಲ ಎಂದು ಟೀಕಿಸಿದರು.
ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಯಾವ ಸರ್ಕಾರಗಳು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿಲ್ಲ, ನಮ್ಮ ಹಕ್ಕು ಪಡೆಯುವ ಶಕ್ತಿ ನಮ್ಮ ಹೋರಾಟಗಳಿಗೆ ಮತ್ತು ಚಳುವಳಿಗಳಿಗೆ ಇದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಪರವಾಗಿ ಆಗಮಿಸಿದ್ದ ತಹಶಿಲ್ದಾರರವರಿಗೆ ರೈತರ ಹಕ್ಕೋತ್ತಾಯಗಳ ಮನವಿಯನ್ನು ನೀಡಲಾಯಿತು.