ಕಲಘಟಗಿ ( ಧಾರವಾಡ) : ತಾಲೂಕಿನ ಗಂಜಿಗಟ್ಟಿ ಗ್ರಾಮದ ದೊಡ್ಡ ಕೆರೆ ಪಕ್ಕದಲ್ಲಿ ಕಿರಿದಾದ ಸೇತುವೆ ಸಾಕಷ್ಟು ಅನಾಹುತ ಮಾಡತಾ ಇದ್ದು, ಇದರಿಂದಾಗಿ ಜನರು ಪಡಬಾರದ ಕಷ್ಟ ಪಡತಾ ಇದ್ದಾರೆ. ಮಳೆಗಾಲದಲ್ಲಿಂತೂ
ಕೆರೆಯ ತುಂಬಿ ಸೇತುವೆ ಮೇಲೆ ರಭಸವಾಗಿ ಬಾರಿ ಪ್ರಮಾಣದ ನೀರು ಹರಿಯುತ್ತದೆ. ಗ್ರಾಮದ ಪ್ರಮುಖ ದೊಡ್ಡ ಮಟ್ಟದ ಕೆರೆಯಾಗಿದ್ದು ಸಾಕಷ್ಟು ಪ್ರಮಾಣದ ನೀರು ವಿವಿಧ ಪ್ರದೇಶಗಳಿಂದ ಬರುತ್ತದೆ.ಊರಿನ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗುವ ಮುಖ್ಯ ಮಾರ್ಗ ಇದಾಗಿದ್ದು, ಗ್ರಾಮಸ್ಥರು ಗೋಳು ಕೇಳುವರು ಯಾರು ಇಲ್ಲದಂತಾಗಿದೆ.
ಹೈಕೋರ್ಟ್ ನಿಂದ ನಿನ್ನೆ ಬಂದಿರೋದು ಪೊಲಿಟಿಕಲ್ ಜಡ್ಜ್ಮೆಂಟ್: ಜಮೀರ್ ಅಹ್ಮದ್!
ಕಳೆದ ಎರಡು ಮೂರು ವರ್ಷದ ಹಿಂದೆ ತಾಯಿ ಜೊತೆ ಮಗು ಜಮೀನಿಗೆ ಹೋಗಿ ಬರುವಾಗ ಮಗು ನೀರಿನ ರಬಿಸಕ್ಕೆ ಕೊಚ್ಚಿಕೊಂಡು ಹೋಗಿ ಮರಣವಾದ ದುರಂತವನ್ನು ನಾವು ಸ್ಮರಿಸುವುದು ಬಹುದಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಸತತ ಮೂರು ದಿನಗಳ ನಿರಂತರ ಪ್ರಯತ್ನದಿಂದ ಬಾಲಕಿಯ ಮೃತ ದೇಹ ಪತ್ತೆ ಹಚ್ಚಿದ್ದಾರೆ. ಮಳೆಗಾಲದಲ್ಲಿ ಕೆರೆ ತುಂಬಿ ರಭಸವಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಕಿರಿದಾದ ಸೇತುವೆ ಸಂಪೂರ್ಣ ಮುಳುಗಿ ಹೋಗುತ್ತದೆ ಇಂತಹ ಸಾಕಷ್ಟು ದುರಂತ ಘಟನೆಗಳು ಸಂಭವಿಸುವೆ. ಸೇತುವೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಮಾಜಿ ಶಾಸಕ ದಿವಂಗತ ಸಿಎಂ. ನಿಂಬಣ್ಣವರ್ ಆಗಿನ ಸಮಯದಲ್ಲಿ ಆದಂತಹ ಘಟನೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಜಿಲ್ಲಾಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಿ ಅವರಿಗೆ ಪತ್ರದ ಮುಖಾಂತರ ಸೇತುವೆ ಕಾಮಗಾರಿ ಬಗ್ಗೆ ಮನವಿ ಮಾಡಿದ್ದರು. ದುರಂತ ಘಟನೆಗಳು ಸಂಭವಿಸಬಾರದೆಂದು 4 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದರು. ಸರ್ಕಾರ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ.
ಗ್ರಾಮದ ಬಡ ಜನರ ಜೀವದ ಜೊತೆ ಆಟವಾಡುತ್ತಿದ್ದು ಇದೇ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಗಂಜಿಗಟ್ಟಿ ಸೇತುವೆ ಬಗ್ಗೆ ವಿಶೇಷ ಗಮನಹರಿಸಬೇಕಾಗಿದೆ. ಈ ಸೇತುವೆ ಮೇಲೆ ಸಾಕಷ್ಟು ಅನಾಹುತಗಳು ಸಂಭವಿಸಿವೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವರು ಯಾರು ಅನ್ನುವುದೇ ಪ್ರಶ್ನೆಯಾಗಿದೆ.
ಜೀವ ಭಯದಲ್ಲಿ ಸೇತುವೆ ಮೇಲೆ ಹೆಜ್ಜೆ ಹಾಕುವ ಗ್ರಾಮಸ್ಥರು ಮಳೆಗೆ ಮುಳುಗುವ ಕಿರು ಸೇತುವೆಗೆ ಮುಕ್ತಿ ನೀಡುವುದು ಯಾವಾಗ ಅನ್ನುವುದೇ ಬಾಲಕಿಯ ಮರಣ ಮೃದಂಗದ ಘಟನೆ ಸಾಕ್ಷಿಯಾಗಿದೆ.