ಹುಬ್ಬಳ್ಳಿ: ಸ್ವಜನ ಪಕ್ಷಪಾತಿ, ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ ಸಿದ್ಧರಾಮಯ್ಯನವರಿಗೆ ತಾವು ಮಾಡಿದ ತಪ್ಪಿಗಾಗಿ ಇವತ್ತು ತಕ್ಕ ಶಾಸ್ತಿಯಾಗಿದೆ. ಈ ನಿಟ್ಟಿನಲ್ಲಿ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು. ಇದು ಅವರ ರಾಜಕೀಯ ಜೀವನದ ಕೊನೆಯ ಮೊಳೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಫ್ರಾನ್ಸ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಕೊರತೆ ಎದುರಿಸುತ್ತಿದೆ: ವಿತ್ತ ಸಚಿವ ಆಂಟೊಯಿನ್ ಅರ್ಮಾಂಡ್
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೈಕೋರ್ಟ್ ಜಡ್ಜಮೆಂಟ್ ಇದೇ ರೀತಿ ಬರುತ್ತದೇ ಎಂದು ರಾಜ್ಯದ ಜನರು ನಿರೀಕ್ಷೆ ಮಾಡಿದ್ದರು. ಅದೇ ರೀತಿಯಲ್ಲಿ ಬಂದಿದೆ. ಈ ನಿಟ್ಟಿನಲ್ಲಿ ಬಹುದೊಡ್ಡ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಹೊಸ ಮುಖ್ಯಮಂತ್ರಿ ಶೋಧನೆಗೆ ಕಾಲಾವಕಾಶ ತೆಗೆದುಕೊಳ್ಳಲಿ. ಆದರೆ ಕೂಡಲೇ ರಾಜೀನಾಮೆ ಕೊಟ್ಟು ಕೋರ್ಟ್ ಮುಂದೆ ಹೋಗಬೇಕು ಎಂದು ಆಗ್ರಹಿಸಿದರು.
ಇನ್ನೂ ಈ ಹಿಂದೆಯೇ ನಾನು ಹೇಳಿದ್ದೇ ಮುಡಾ ಹಗರಣ ಇದು ಸಿದ್ಧರಾಮಯ್ಯನವರ ರಾಜಕೀಯ ಇತಿಹಾಸದ ಕೊನೆಯ ಮೊಳೆ ಎಂದು ಈಗ ಕೂಡ ಹೇಳುತ್ತಿದ್ದೇನೆ. ಈ ಪ್ರಕರಣ ಸಿದ್ಧರಾಮಯ್ಯನವರ ರಾಜಕೀಯ ಜೀವನದ ಕೊನೆಯ ಅಧ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.