ಮೈಸೂರು: ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಇಂದು ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮೈಸೂರು ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂರನ್ನು ಅವರ ಆಪ್ತ ಸಚಿವ ಭೈರತಿ ಸುರೇಶ್, ಕಾನೂನು ಸಲಹೆಗಾರ ಪೊಣ್ಣನ್ನ ಸೇರಿ ದಾರಿ ತಪ್ಪಿಸಿದರು.
ಸಿಎಂ ಸ್ವತಃ ವಕೀಲರು ಅರಿತುಕೊಳ್ಳುವುದರಲ್ಲಿ ಎಡವಿದ್ದಾರೆ. ಹೀಗಾಗಿ ಈ ಸ್ಥಿತಿಗೆ ತಲುಪಿದ್ದಾರೆ ಎಂದರು. ಸಿಎಂ ರಾಜೀನಾಮೆ ವಿಚಾರವಾಗಿ ಮಾತನಾಡಿ, ಅವರು ಕಾನೂನನ್ನು ಅರಿತವರು. ಊರಿಗೆಲ್ಲಾ ಬುದ್ಧಿ ಹೇಳುವ ಸಿಎಂ ತಾವೇ ಬದನೆಕಾಯಿ ತಿನ್ನೋದಿಕ್ಕೆ ಆಗಲ್ಲ. ಅವರು ರಾಜೀನಾಮೆ ಕೊಡಲೇಬೇಕು ಎಂದು ಈ ಆಗ್ರಹಿಸಿದರು.
ರಾತ್ರಿ ಬಟ್ಟೆಯಿಲ್ಲದೇ ಮಲಗಿದ್ರೆ ಏನಾಗುತ್ತೆ..? ಇಲ್ಲಿದೆ ನಿಮಗೆ ಗೊತ್ತಿಲ್ಲದ ರೋಚಕ ಸತ್ಯಗಳು
ಸಿಎಂ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಮಾಡಿದ ಅಪಪ್ರಚಾರಗಳೆಲ್ಲವೂ ಈಗ ಇವರು ಸುಳ್ಳು ಎಂದು ತೀರ್ಪಿನ ಮೂಲಕ ಸಾಬೀತಾಯಿತು. ಇವರಿಗೆ ಸುಪ್ರೀಂ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಇರಬಹುದು. ಆದರೆ ಈಗಂತು ನಿರಾಶೆ ಆಗಿದೆ. ಆದ್ದರಿಂದ ಯಾವತ್ತು ಸತ್ಯಕ್ಕೆ ಜಯ ಸಿಕ್ಕಿರೋದಂತು ನಿಜ ಎಂದು ಹೇಳಿದರು.