ಬೆಂಗಳೂರು : ಇಡೀ ರಾಜ್ಯ ವನ್ನೇ ಬೆಚ್ಚಿಬೀಳಿಸಿದ್ದ ಮಹಾಲಕ್ಷ್ಮಿ ಕೊಲೆ ಪ್ರಕರಣದ ಆರೋಪಿಯ ಬಗ್ಗೆ ಪೋಲಿಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಹತ್ಯೆ ಮಾಡಿದವನ ಬಂಧಿಸುವುದಾಗಿ ಪೊಲೀಸರು ಹೇಳಿದಾರೆ . ಹತ್ಯೆ ಮಾಡಿ ಒಂದೇ ಒಂದು ಸಣ್ಣ ಸುಳಿವು ಬಿಡದೆ ಎಸ್ಕೇಪ್ ಆಗಿರೋ ಕೊಲೆ ಗಾರನ ಬಂದಿಸೋದಕ್ಕೆ 6 ವಿಶೇಷ ಟೀಂ ಗಳನ್ನು ರಚನೆ ಮಾಡಲಾಗಿತ್ತು..ಇದರ ಕಂಪ್ಲೀಟ್ ಡೀಟೇಲ್ಸ್…
ದಸರಾ ಮಹೋತ್ಸವ-2024ಕ್ಕೆ ದಿನಗಣನೆ ಆರಂಭ: ಗೋಲ್ಡ್ ಕಾರ್ಡ್ ವ್ಯವಸ್ಥೆಗೆ ಅವಕಾಶ!
ವೈಯಾಲಿಕಾವಲ್ ಸ್ಟೇಷನ್ ಲಿಮಿಟ್ಸ್ ನಲ್ಲಿ ನಡೆದಿರುವ ಮಹಾಲಕ್ಷ್ಮಿ ಕೊಲೆ ಪ್ರಕರಣದ ಬಗ್ಗೆ ಪೋಲಿಸರು ನಾಲ್ಕು ಸ್ಪೆಷಲ್ ಟೀಂ ಮಾಡಿದ್ದು.ಖಾಕಿ ಟೀಂ ಒಂದು ಸುಳಿವು ಸಿಕ್ಕಿದ್ದು ಆದಷ್ಟು ಬೇಗ ಆರೋಪಿಯನ್ನ ಬಂದಿಸುವುದಾಗಿ ಪೋಲಿಸ್ ಕಮೀಷನರ್ ಬಿ ದಯಾನಂದ ಹೇಳಿದ್ರು.
ಇನ್ನೂ ಆರೋಪಿ ಮೃತಹೇದವನ್ನ ಸುಮಾರು 59 ತುಂಡುಗಳಾಗಿ ಮಾಡಿದ್ದಾನೆ. ಮೊದಲಿಗೆ ದೇಹ ತುಂಡರಿಸಿ ಸೂಟ್ ಕೇಸ್ ನಲ್ಲಿ ತುಂಬುಕೊಂಡು ಹೋಗುವ ಪ್ಲಾನ್ ಮಾಡಿದ್ದಾನೆ. ಆದ್ರೆ ಸೂಟ್ ಕೇಸ್ ಗೆ ಮೃತದೇಹದ ತುಂಡುಗಳು ಹೆಚ್ಚಾದ್ದರಿಂದ ಸೂಟ್ ಕೇಸ್ ಅಲ್ಲೇ ಬಿಟ್ಟು ಫ್ರಿಡ್ಜ್ ನಲ್ಲಿ ದೇಹದ ಭಾಗಗಳನ್ನ ತುಂಬಿ ಎಸ್ಕೇಪ್ ಆಗಿದ್ದಾನೆ.
ಕೊಲೆ ಮಾಡಿದ ನಂತರ ಆರೋಪಿ ಯಾವುದೇ ಸಣ್ಣ ಸಾಕ್ಷಿಯನ್ನು ಬಿಡಲಿಲ್ಲ, ದೇಹವನ್ನು ,59 ಪೀಸ್ ಗಳಾಗಿ ಕತ್ತರಿಸಿದ್ದಾನೆ.ಮನೆಯಲ್ಲಿ ರಕ್ತದ ಕಲೆಗಳು ಸಿಗಬಾರದೆಂದು ಕ್ಲೀನ್ ಮಾಡಿದ್ದಾನೆ. ಲೂಮಿನಲ್ ಟೆಸ್ಟ್ ಮಾಡಿದ್ರು ಸಾಕ್ಷಿಗಳು ಸಿಗಬಾರದು ,ಎಂದು ಮೊದಲೇ ಪ್ಲಾನ್ ಮಾಡಿದ್ದಾನೆ, FSL ಟೀಂ ಗೂ ಕೂಡ ದೊಡ್ಡ ತಲೆನೋವಾಗಿದೆ.ಇನ್ನೂ ಹತ್ಯೆ ಮಾಡಿದ ಮನೆಯಲ್ಲಿ ಸ್ನಾನ ಮಾಡಿಕೊಂಡು ಬಟ್ಟೆ ಬದಲಾಯಿಸಿಕೊಂಡು ಹೋಗಿರೋ ಶಂಕೆಯಿದೆ. ಆರೋಪಿ ಹೋಗಿರುವ ಮಾರ್ಗದ ಸಿಸಿಟಿವಿಗಳನ್ನ ಕೂಡ ಪರಿಶೀಲನೆ ನಡೆಸುತ್ತಿದ್ದಾರೆ.ಒಂದು ಟೀಂ ರಾಜಸ್ಥಾನ, ಉತ್ತರಖಂಡ್ ಹಾಗೂ ವೆಸ್ಟ್ ಬೆಂಗಲ್ ಗೆ ಒಂದು ಟೀಮ್ ಹೋಗಿದ್ದು ಅಪರೆಷನ್ ಕಿಲ್ಲರ್ ಗಾಗಿ ಶೋಧ ನಡೆಸುತ್ತಿದ್ದಾರೆ..
ಒಟ್ಟಿನಲ್ಲಿ ಸುಳಿವೇ ಇರದಿದ್ದ ಅದೆಷ್ಟೋ ಕೇಸ್ ಗಳನ್ನ ಪತ್ತೆ ಹಚ್ಚಿರೋ ಪೋಲಿಸರು .ಈ ಪ್ರಕರಣವನ್ನು ಕೂಡ ಆದಷ್ಟು ಬೇಗ ಟ್ರೇಸ್ ಮಾಡ್ತಾರೆ ಅನ್ನೋ ನಂಬಿಕೆ ಖಾಕಿ ಟೀಂಗೆ. ಆದಷ್ಟು ಬೇಗ ಕೊಲೆಗಾರನನ್ನ ಅರೆಸ್ಟ್ ಮಾಡಿ ಸತ್ಯ- ಸತ್ಯಾತೆ ಹೊರಬರಲಿ ಅನ್ನೋದು ಎಲ್ಲರ ಆಶಯ..