ಬೆಂಗಳೂರು:-ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ 104 ದಿನಗಳ ನಂತರ ಬಿಗ್ ರಿಲೀಫ್ ಸಿಕ್ಕಿದೆ.. ಕೊಲೆ ಆರೋಪಿಗಳಿಗೆ ನ್ಯಾಯಾಲಯ ಇದೀಗ ಜಾಮೀನು ಮಂಜೂರು ಮಾಡಿದೆ…ಆದ್ರೆ ದರ್ಶನ್ ಹಾಗು ಪವಿತ್ರಾಗೌಡಗೆ ಬೇಲ್ ಟೆಂನ್ಷನ್ ಇನ್ನೂ ಮುಂದುವರೆದಿದೆ… ಹಾಗಾದ್ರೆ ಬೇಲ್ ಸಿಕ್ಕಿದ್ದು ಯಾರ್ಯಾರಿಗೆ , ಕೊಲೆಯಲ್ಲಿ ಇವರ ಪಾತ್ರ ಏನ್ನಿತ್ತು ಪವಿತ್ರಾ ದರ್ಶನ್ ಬೇಲ್ ಕಥೆ ಏನಾಯ್ತು ಅನ್ನೋ ಡಿಟೇಲ್ಸ್ ತೋರಿಸ್ತೀವಿ ನೋಡಿ,,,,,
ಸಿಡಿಲು ಬಡಿದು ಅವಘಡ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಾವು!
ಜೂನ್ 9 ಕ್ಕೆ ಬೆಂಗಳೂರಿನ ಸುಮನಹಳ್ಳಿ ಬಳಿಯ ರಾಜ ಕಾಲುವೆ ಬಳಿ ಭೀಕರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೇಣುಕಾಸ್ವಾಮಿ ಪತ್ತೆಯಾಗಿತ್ತು..ಕಾಮಾಕ್ಸಿ ಪಾಳ್ಯ ಪೊಲೀಸಠಾಣೆಗೆ ಹೋಗಿ ಈ ಕೊಲೆ ನಾವೇ ಮಾಡಿದ್ದು ಎಂದು ಮೂರು ಜನ ಸರೆಂಡರ್ ಆಗಿದ್ರು. ಅವರ್ಯಾರು ಅಂದ್ರೆ ಇದೇ ಕಾರ್ತಿಕ್ ಅಲಿಯಾಸ್ ಕಪ್ಪೆ ನಿಖಿಲ್ ಹಾಗು ಕೇಶವ ಮೂರ್ತಿ… ರೇಣುಕಾಸ್ವಾಮಿಯ ಜೀವ ತೆಗೆದ ಮೇಲೆ ಕೊಲೆ ಕೇಸ್ ನಲ್ಲಿ ಫಿಕ್ಸ್ ಆಗೋಕ್ಕೆ ಈ ಮೂವ್ವರನ್ನು ಒಪ್ಪಿಸಿ ಐದೈದು ಲಕ್ಷ ಟಡ್ವಾನ್ಸ್ ಕೋಡ ಕೊಟ್ಟಿದ್ರಂತೆ. ಪೊಲೀಸರಿಗೆ ಆರೋಪಿಗಳು ಹೇಳಿದ ಕೊಲೆಯಕಾರಣ ಕೇಳಿ ಪೊಲೀಸರಿಗೆ ಅನುಮಾನ ಬಂದು ಸರಿಯಾಗಿ ವಿಚಾರಣೆ ಮಾಡಿದಾಗ ಕೇಸ್ ನಲ್ಲಿ ದರ್ಶನ್ ಲಿಂಕ್ ಮಾಹಿತಿ ಕೊಟ್ಟಿದ್ದು ಇದೇ ಕೇಶವ ಮೂರ್ತಿ…
ಇದೀಗ ಎ17 ಕೇಶವಮೂರ್ತಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠ ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ 57 ಸಿಸಿಎಚ್ ನ್ಯಾಯಾಲಯ 15 ಕಾರ್ತಿಕ್ ಹಾಗು ಎ16 ನಿಖಿಲ್ ಗೂ ಜಾಮೀನು ಷರತ್ತು ಬದ್ಧ ಮಂಜೂರು ಮಾಡಿದೆ. 104 ದಿನಗಳಿಂದ ಸೆರೆವಾಸದಲ್ಲಿರುವ ಮೂರು ಆರೋಪಿಗಳಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ… ಆರೋಪಿ ವಕಾಲತ್ತು ವಹಿಸಿ ವಾದ ಮಂಡಿಸಿದ್ದ ವಕೀಲ ರಂಗನಾಥ್ ರೆಡ್ಡಿ ಎ15 ಎ16 ಎ17 ಆರೋಪಿಳ ಮೇಲೆ ಸಾಕ್ಷನಾಶದ ಆರೋಪಗಳು ಇರೋದ್ರಿಂದ ಪದ್ದತ್ತಿಯಂತೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದವರಿಗೂ ಇದೇ ಗ್ರೌಂಡ್ಸ್ ಮೇಲೆ ಜಾಮೀನು ಕೇಳಲು ಆಗಲ್ಲ ವರಿಗೆ ಬೇರೆ ಗ್ರೌಂಡ್ಸ್ ಮೇಲೆ ಜಾಮೀನು ಕೇಳಲಿದ್ದೇವೆ ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ…
ಬಳ್ಳಾರಿ ಜೈಲ್ ನ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ವಿಲವಿಲಾಂತ ಒದ್ದಾಡುತ್ತಿರುವ ಎ 2 ಆರೋಪಿ ನಟ ದರ್ಶನ್ ಹಾಗು ಪವಿತ್ರಾಗೌಡ ರ ಜಾಮೀನು ಇಂದೂ ವಿಚಾರಣೆ ಭಾಗ್ಯ ಕಾಣಲಿಲ್ಲ.. ದರ್ಶನ್ ಪರ ಹಿರಿಯ ವಕೀಲ ಸಿ ವಿ ನಾಗೇಶ್ ತಂಡದ ಸುನೀಲ್ ಅರ್ಜಿ ಸಲ್ಲಿಸಿದ್ರೆ, ಪವಿತ್ರಾಗೌಡ ಪರವಾಗಿ ಹಿರಿಯ ವಕೀಲ ಟಾಮಿಸೆಬಾಸ್ಟೀನ್ 57 ನೇ ಸಿಸೆಚ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ರು.ಇಂದು ಬೇಲ್ ಅರ್ಜಿಯನ್ನು ನ್ಯಾಯಾಧೀಶರು ವಿಚಾರಣೆಗೆ ತೆಗೆದುಕೊಂಡಾದ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಪ್ರಸನ್ನಕುಮಾರ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ್ರು… ಎಸ್ಪಿಪಿ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು ದರ್ಶನ್ ಜಾಮೀನು ಅರ್ಜಿವಿಚಾರಣೆಯನ್ನು ಸೆ. 27ಕ್ಕೆ ಮುಂದೂಡಿದ್ರೆ ಪವಿತ್ರಗೌಡ ಅರ್ಜಿ ವಿಚಾರಣೆಯನ್ನು ಸೆ. 25ಕ್ಕೆ ಮುಂದೂಡಿದ್ರು…
ಈ ಮಧ್ಯೆ ಇಂದು ವಿಜಯಲಕ್ಷ್ಮೀ ಬಳ್ಳಾರಿ ಜೈಲಿನಲ್ಲಿ ಪತಿ ದರ್ಶನ್ ನನ್ನು ಭೇಟಿ ಮಾಡಿದ್ರು… ವಿಜಯಲಕ್ಷ್ಮಿ ಜೊತೆಗೆ ದರ್ಶನ್ ಅಳಿಯ ಸುಶಾಂತ್ ನಾಯ್ಡು, ಹಾಗು ಆಪ್ತ ಹೇಮಂತ್ ಕೂಡ ಭೇಟಿಗೆ ಬಂದಿದ್ದು ಎರಡು ಬ್ಯಾಗ್ ಗಳಲ್ಲಿ ತಂದಿದ್ದ ಬಟ್ಟೆ, ಬಿಸ್ಕಿಟ್ಸ್, ಟ್ಯಾಬ್ಲೆಟ್ಸ್, ಡ್ರೈಪ್ರೂಟ್ಸ್ ದರ್ಶನ್ ಕೊಟ್ಟಿದ್ದಾರೆ… ಭೇಟಿ ವೇಳೆ ಜಾಮೀನು ಅರ್ಜಿ ಮುಂದೂಡಿಕೆ ಆಗಿರೋ ಬಗ್ಗೆ ಮಾಹಿತಿ ಕೊಟ್ಟಿರುವ ಪತ್ನಿ ವಿಜಯಲಕ್ಷ್ಮಿ ದರ್ಶನ್ಗೆ ಜಾಮೀನು ಸಿಗುತ್ತೆ ಚಿಂತೆ ಮಾಡಬೇಡಿ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ…ಇನ್ನು ಜೈಲಿನಲ್ಲಿ ಸಮಸ್ಯೆ ಆಗ್ತಿದೆ ಎಂದು ಪತ್ನಿ ಮುಂದೆ ಅಳಲು ತೋಡಿಕೊಂಡಿರುವ ದರ್ಶನ್ ಎಷ್ಟೇ ಮನವಿ ಮಾಡಿದ್ರೂ ಜೈಲಿನಲ್ಲಿ ದಿಂಬು, ಬೆಡ್ ಹಾಗೂ ಪ್ಲಾಸ್ಟಿಕ್ ಚೇರ್ ಕೊಡ್ತಿಲ್ಲ ಈ ವಿಚಾರ ವಕೀಲರ ಜೊತೆ ಚರ್ಚೆ ಮಾಡಿ ಎಂದು ಪತ್ನಿ ವಿಜಯಲಕ್ಷ್ಮಿಗೆ ತಿಳಿಸಿದ್ರು ಎನ್ನಲಾಗಿದೆ.ಇನ್ನೂ ಸ್ವಲ್ಪ ದಿನ ಅಷ್ಟೇ ಎಲ್ಲಾ ಸರಿ ಹೋಗ್ತದೆ ಧೈರ್ಯವಾಗಿರಿ ಎಂದು ದರ್ಶನ್ ಗೆ ಪತ್ನಿ ವಿಜಯಲಕ್ಷ್ಮಿ ಧೈರ್ಯ ತುಂಬಿದ್ರಂತೆ…
ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೂವ್ವರಿಗೆ ಬೇಲ್ ಸಿಕ್ಕಿದ್ದು ಳಿದ ಆರೋಪಿಗಳಿಗೂ ಜಾಮೀನು ಸಿಕ್ಕಿ ಜೈಲಿನಿಂದ ಬಿಡುಗಡೆಯಾಗುವ ಆಸೆ ಚಿಗುರೊಡೆದಿದೆ… ಇನ್ನು ದರ್ಶನ್ ಹಾಗು ಪವಿತ್ರಾಗೌಡಗೆ ನ್ಆಯಾಲಯ ಬೇಲ್ ಕೊಡುತ್ತಾ? ಇಲ್ವಾ ಅನ್ನೋದನ್ನು ಕಾದುನೋಡಬೇಕಿದೆ..