ಕಲಘಟಗಿ( ಧಾರವಾಡ) : ತಾಲೂಕಿನ ಮಲಕನಕೊಪ್ಪ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಗೆ ಸರಿಯಾಗಿ ಆಗಮಿಸುತಿಲ್ಲ ಇದರಿಂದಾಗಿ ಬೇಸತ್ತ ವಿದ್ಯಾರ್ಥಿಗಳು ಬಸ್ ತಡೆದು ಇಂದು ಪ್ರತಿಭಟನೆ ಮಾಡಿದರು.
ಕಾಂಗ್ರೆಸ್ಗೆ ದ್ರೋಹ ಮಾಡಲು ಹೋಗಬೇಡಿ: ಕಾರ್ಯಕರ್ತರಿಗೆ ಈಶ್ವರ್ ಖಂಡ್ರೆ ಮನವಿ!
ಈ ಗ್ರಾಮದ ಸುತ್ತಮುತ್ತ ಬಸ್ ಸಮಯಕ್ಕೆ ಸರಿಯಾಗಿ ಬರುತಿಲ್ಲ ಇದರಿಂದಾಗಿ ವಿದ್ಯಾರ್ಥಿ ಪ್ರಯಾಣಿಕರ ಗೂಳು ಕೇಳುವವರಿಲ್ಲ. ಸಾಕಷ್ಟು ಬಸ್ ಇದ್ದರು ಬರತಾ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಆಗತಾ ಇಲ್ಲ. ಬರುವ ಒಂದೇ ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರು ಪ್ರಯಾಣಿಸುವುದನ್ನು ಕಂಡು ಸಮಯಕ್ಕೆ ಸಾಕಷ್ಟು ಜನರು ನಿತ್ಯ ಪ್ರಯಾಣಿಸುತ್ತಾರೆ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಶಾಲೆಕಾಲೇಜಿಗಳಿಂದ ವಂಚಿತರಾಗುತ್ತಿದ್ದಾರೆ.
ಇದರಿಂದ ಆಕ್ರೋಶ ವ್ಯಕ್ತಪಡಿಸಿ ಕೆಲವತ್ತು ಹೊತ್ತು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್ ತಡೆಹಿಡಿದರು. ಸ್ವಲ್ಪ ಹೊತ್ತಿನ ನಂತರ ಕಾರ್ಮಿಕ ಸಚಿವರ ಸಿಬ್ಬಂದಿ ಮನವಿ ಮೇರೆಗೆ ಸ್ವಲ್ಪ ಹೊತ್ತಿನ ನಂತರ ಬಸ್ ಒದಗಿಸಲಾಯಿತು. ಆದರೆ ಇಷ್ಟಕ್ಕೆ ಸುಮ್ಮನೆ ಆಗದ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಇದೇ ರೀತಿ ಮತ್ತೆ ಸಮಸ್ಯೆ ಆದರೆ ಡಿಪೋ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಭು ಅಂಗಡಿ, ಸಂತೋಷ್ ವಡ್ಡರ್, ಮಲ್ಲಿಕಾರ್ಜುನ ಕುಂಕುರ್, ಅರ್ಜುನ್ ವಡ್ಡರ್, ಪ್ರಯಾಣಿಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.