ಕಲಘಟಗಿ : ನಮ್ಮ ವಿಧಾನಸಭಾ -75 ಕ್ಷೇತ್ರವು ಶಿಕ್ಷಣದಿಂದ ವಂಚಿತ ಕ್ಷೇತ್ರವಾಗಿದೆ ಎಂದು ಧಾರವಾಡ ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಹೇಳಿದರು. ಪಟ್ಟಣದ 12 ಎತ್ತಿನ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ 86 ಹಳ್ಳಿಗಳಿವೆ, 75% ಲಿಂಗಾಯತ ಸಮುದಾಯ ಇದೆ. ಅದರಲ್ಲಿ ಹೆಚ್ಚಿನವರು ಕೃಷಿಕರಾಗಿದ್ದಾರೆ.
ಆರೋಗ್ಯ ಕೃಷಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರಗಳಿಗೆ ಮಲಪ್ರಭಾ ನೀರು ಬರುತ್ತದೆ. ನಮ್ಮ ನೀರಸಾಗರ ಜಲಾಶಯದ ನೀರು ನಮ್ಮ ಕ್ಷೇತ್ರಕ್ಕೆ ವಾಪಸ್ ತರಲು ಪ್ರಯತ್ನಿಸಬೇಕು. ಡಿಪ್ಲೋಮಾ ಕಾಲೇಜು, ಉದ್ಯೋಗಕ್ಕಾಗಿ ಗಾರ್ಮೆಂಟ್ಸ್, ಶುಗರ್ ಫ್ಯಾಕ್ಟರಿ ಸ್ಥಾಪಿಸಲು ಒಕ್ಕಟ್ಟಾಗಿ ಪ್ರಯತ್ನಿಸೋಣ. ದಿ. ಸಿ.ಎಂ ನಿಂಬಣ್ಣವರ್ ಈ ಸಂಘಟನೆಗೆ ನಿರಂತರ ಪ್ರಯತ್ನಿಸಿದ್ದರು.
ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಸಬ್ಸಿಡಿ ಎಷ್ಟು..?ಯಾರು ಅರ್ಜಿ ಸಲ್ಲಿಸಬಹುದು, ಮಾಹಿತಿ ಇಲ್ಲಿದೆ
ಈ ಅಧ್ಯಕ್ಷರ ಅವಧಿ ಐದು ವರ್ಷ ಇದ್ದು ಎಲ್ಲರೂ ಸಹಕರಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ವಿ ತಡಸಮಠ ಈ ಸಂಘಟನೆಯು 1904 ರಲ್ಲಿ ಹಾನಗಲ್ ಕುಮಾರ ಸ್ವಾಮಿಗಳು ಸ್ಥಾಪನೆ ಮಾಡಿದ್ದು ಇಂದು ರಾಷ್ಟ್ರೀಯ ಮಟ್ಟದ ಸಂಘಟನೆ ಆಗಿದೆ. ಲಿಂಗ ಧರಿಸುವ ಎಲ್ಲ ಒಳಪಂಗಡಗಳೂ ಇದೇ ತತ್ವದ ಅಡಿಯಲ್ಲಿವೆ.
ಎಲ್ಲರೂ ಸೇರಿ ಸಂಘಟನೆ ಬಲಪಡಿಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ 3.2 ಗೋಕುಲ ವೈಮನಸ್ಸುಗಳನ್ನು ತೊಡೆದು ಹಾಕೋಣ ಸಂಘಟಿತರಾಗೋಣ, ಸದಸ್ಯತ್ವ ಸಂಖ್ಯೆ ಹೆಚ್ಚು ಮಾಡಬೇಕು. ದ್ವೇಷ ಮನೋಭಾವನೆ ಇಲ್ಲದ ಶಾಂತಿಯ ಕ್ಷೇತ್ರ ಇದಾಗಿದ್ದು ಒಟ್ಟಾರೆ ಅಭಿವೃದ್ಧಿ ಪಡಿಸೋಣ ಎಂದರು. ಮೋಹನ ಅಸುಂಡಿ, ವಿ ಎಸ್ ಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಷ. ಬ್ರ ರೇವಣಸಿದ್ಧ ಶಿವಾಚಾರ್ಯ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ರವಿಕುಮಾರ නයි, nego ಮರಲಿಂಗಣ್ಣನವರ್, ಮಾಲಾ ಗೋಕುಲ್, ಜಿಲ್ಲಾ ಉಪಾಧ್ಯಕ್ಷ ಬಿ ವೈ ಪಾಟೀಲ್, ಶಿವಣ್ಣ ಅದರಗುಂಚಿ, ನಿಂಗಪ್ಪ ಕಂಪ್ಲಿ ಸುರೇಶ್ ಗಾಣಗೇರ, ಮಾದೇವಪ್ಪ ಲಕ್ಕಪ್ಪನವರ್, ಶಂಕ್ರಣ್ಣ ರಾಯನಾಳ, ಗುರು ಬೆಂಗೇರಿ ಹಾಗೂ ಎಲ್ಲ ಒಳಪಂಗಡ ಗಳ ಮುಖಂಡರು ಉಪಸ್ಥಿತರಿದ್ದರು. ಬಿ ಎಸ್ ತಿಪ್ಪಣ್ಣವರ್ ನಿರೂಪಿಸಿ ವಂದಿಸಿದರು.
ವರದಿ : ವರದಿ ಮಾರುತಿ ಲಮಾಣಿ