ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಬಳ್ಳಾರಿ ಜೈಲಿನಲ್ಲಿ ದಿನ ದೂಡುತ್ತಿದ್ದು, ಏನು ಕೇಳಿದರೂ ಕಷ್ಟ ಎನ್ನುವಂತ ಸ್ಥಿತಿ ಬಂದಿದೆ. ಇದೀಗ ಆರೋಪಿ ದರ್ಶನ್ ಜೈಲಧಿಕಾರಿಗಳಿಗೆ ಬೆಡ್, ತಲೆದಿಂಬು ಮತ್ತು ಚೇರ್ಗೆ ಬೇಡಿಕೆ ಇಟ್ಟಿದ್ದು, ಅಧಿಕಾರಿಗಳು ಸರಾಸಗಟವಾಗಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಬಳ್ಳಾರಿ ಜೈಲಧಿಕಾರಿಗಳ ಮೇಲೆಯೇ ದರ್ಶನ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇನ್ನೂ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣದಿಂದಾಗಿ ಜೈಲಧಿಕಾರಿಗಳ ತಲೆದಂಡ ಆಗಿತ್ತು. ಹೀಗಾಗಿ ಬಳ್ಳಾರಿ ಸೆಂಟ್ರಲ್ ಜೈಲು ಸಿಬ್ಬಂದಿ ಭೀತಿಯಲ್ಲಿದ್ದಾರೆ. ಜೊತೆಗೆ ದರ್ಶನ್ ಬೇಡಿಕೆಯನ್ನು ತಿರಸ್ಕರಿಸುತ್ತಿರುವುದು ಹಾಗೂ ಮ್ಯಾನುವಲ್ನಲ್ಲಿರುವ ಸೌಲಭ್ಯ ಕೊಡುವ ವಿಚಾರದಲ್ಲೂ ಅಷ್ಟೇ ಗಮನಹರಿಸುತ್ತಿದ್ದಾರೆ.
ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಸಬ್ಸಿಡಿ ಎಷ್ಟು..?ಯಾರು ಅರ್ಜಿ ಸಲ್ಲಿಸಬಹುದು, ಮಾಹಿತಿ ಇಲ್ಲಿದೆ
ಇದೇ ಕಾರಣದಿಂದಾಗಿ ಬಳ್ಳಾರಿ ಜೈಲಿನ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಎಚ್ಚರಿಕೆ ನಡೆ ಇಡುತ್ತಿದ್ದಾರೆ. ಈ ಕಾರಣದಿಂದಾಗಿ ದರ್ಶನ್ ಕುಟುಂಬಸ್ಥರು ಜೈಲಧಿಕಾರಿಗಳು ಮೇಲೆ ಕೋಪ ತೋರಿಸುತ್ತಿದ್ದಾರೆ. ಸೌಲಭ್ಯ ಕೊಟ್ಟರೆ ಇಲಾಖೆ ಮತ್ತು ಸರಕಾರದಿಂದ ತಲೆದಂಡ ಆಗೋ ಭೀತಿ ಇದೆ. ಇದರ ನಡುವೆ ಸೌಲಭ್ಯ ಕೊಡುತ್ತಿಲ್ಲವೆಂದು ಹೇಳಿ ದರ್ಶನ್ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುವ ಸಾಧ್ಯತೆಯಿದೆ.