ಹುಬ್ಬಳ್ಳಿ, ಸೆ.19, 2024: ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ, ಕುಂದಗೋಳ ಹಾಗೂ ನವಲಗುಂದ ಉಪ ವಿಭಾಗದ ಕಚೇರಿಗಳಲ್ಲಿ ಸೆ. 21 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ1 ಗಂಟೆಯವರೆಗೆ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್ ಬಿ. ಅವರು, ಹುಬ್ಬಳ್ಳಿ ಗ್ರಾಮೀಣ ಉಪವಿಭಾಗ ವ್ಯಾಪ್ತಿಯ ಅಂಚಟಗೇರಿ,
ನೀವು ಆಸ್ತಿ ಪತ್ರ ಕಳೆದುಕೊಂಡಿದ್ದೀರಾ..? ಚಿಂತೆ ಬಿಡಿ – ಇಲ್ಲಿದೆ ನೋಡಿ ಸುಲಭ ಪರಿಹಾರ
ಬ್ಯಾಹಟ್ಟಿ, ನೂಲ್ವಿ, ಶಿರಗುಪ್ಪಿ, ನವಲಗುಂದ ಉಪವಿಭಾಗದ ನವಲಗುಂದ ಪಟ್ಟಣ, ನವಲಗುಂದ ಗ್ರಾಮೀಣ, ಅಣ್ಣಿಗೇರಿ ಪಟ್ಟಣ ಹಾಗೂ ಅಣ್ಣಿಗೇರಿ ಗ್ರಾಮೀಣ, ಕುಂದಗೋಳ ಉಪವಿಭಾಗದ ಕುಂದಗೋಳ, ಸಂಶಿ ಹಾಗೂ ಗುಡಗೇರಿ ವಿಭಾಗದ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿದ್ದಾರೆ.