ಧಾರವಾಡ: ನವಲಗುಂದ ತಾಲೂಕಿನ ಅಳಗವಾಡಿಯಲ್ಲಿ ರೈತ ಮುಖಂಡ ದಿವಂಗತ ಬಸಪ್ಪ ಲಕ್ಕುಂಡಿಯವರ ಮೂರ್ತಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Narendra Modi: ಭಾರತದಲ್ಲಿ 2030 ರ ವೇಳೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಪ್ರಧಾನಿ ಮೋದಿ
ಮಂಗಳವಾರ ರಾತ್ರಿ ಅಳಗವಾಡಿಯಲ್ಲಿ ರೈತ ಮುಖಂಡ ಲಕ್ಕುಂಡಿಯವರ ಮೂರ್ತಿಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಇದು ಇಡೀ ರೈತ ಕುಲಕ್ಕೆ ಮಾಡಿದ ಅನ್ಯಾಯವಾಗಿದ್ದು, ಕೂಡಲೇ ಆ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.