ದೊಡ್ಡಬಳ್ಳಾಪುರ: ಅದು ಬಡ ರೋಗಿಗಳಿಗೆ ಅಂತಲೆ ನಿರ್ಮಾಣ ಮಾಡಿರುವ ಸರ್ಕಾರಿ ಆಸ್ವತ್ರೆ ಹೀಗಾಗೆ ನಿತ್ಯ ನೂರಾರು ಜನ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಕಳೆದ ರಾತ್ರಿ ಸಹ ಎದೆನೋವು ಅಂತ ಆಸ್ವತ್ರೆಗೆ ಬಂದ ನಖಲಿ ರೋಗಿಯೋರ್ವ ಮಾಡಿದ ಕೆಲಸ ನೋಡಿ ಸಿಬ್ಬಂದಿ ಜೊತೆಗೆ ಜನರು ಸಹ ಬೆಚ್ಚಿ ಬಿದ್ದಿದ್ದು ಬಿಸಿ ಬಿಸಿ ಕಜ್ಜಾಯ ನೀಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಮಧ್ಯರಾತ್ರಿ ಒಂದು 30 ರ ಸಮಯ ಆಸ್ವತ್ರೆಯಲ್ಲ ಸೈಲೆಂಟ್ ಆಗಿ ಇದ್ರೆ ಇವನೊಬ್ಬ ಮಾತ್ರ ನನಗೆ ಆ ನೋವು ಈ ನೋವು ಅಂತ ಕಂಡ ಕಂಡ ವಾರ್ಡಗಳ ಒಳಗಡೆ ಹೋಗಿ ಬರ್ತಿದ್ದಾನೆ. ವೈದ್ಯರು ಚಿಕಿತ್ಸೆ ನೀಡಿದ್ರು ಮನೆಗೆ ಹೋಗದೆ ರಾತ್ರಿ ವಾರ್ಡಗಳಲ್ಲಿ ರೌಂಡ್ಸ್ ಮಾಡ್ತಿದ್ದವನು ಏನು ಮಾಡ್ತಿದ್ದಾನೆ ಅಂತ ಹಿಂಬಾಲಿಸಿದ ಆಸ್ವತ್ರೆಯ ಒಳ ರೋಗಿಗಳಿಗೆ ಕಂಡು ಬಂದಿದ್ದು ನಖಲಿ ರೋಗಿಯ ಕೈ ಚಳಕ ದೃಶ್ಯ.
ಹೌದು ಅಂದಹಾಗೆ ಇಲ್ಲಿ ಈ ರೀತಿ ಮಧ್ಯರಾತ್ರಿ ಆಸ್ವತ್ರೆಯಲ್ಲಿ ರೌಂಡ್ಸ್ ಹಾಕಿ ಹುಡುಕಾಟ ನಡೆಸುತ್ತಿರುವ ಇವನ ಹೆಸರುಯ ಶಂಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕರ ಆಸ್ವತ್ರೆಗೆ ಕಳೆದ ರಾತ್ರಿ ಎದೆ ನೋವು ಅಂತ ಬಂದಿದ್ದ ಭೂಪ ಮೊದಲಿಗೆ ಆಸ್ವತ್ರೆಯ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾನೆ. ನಂತರ ಚಿಕಿತ್ಸೆ ಪಡೆದವನು ಮನಗೆ ಹೋಗದೆ ನೇರವಾಗಿ ಆಸ್ವತ್ರೆಯ ಮೊದಲನೆ ಮಹಡಿಗೆ ತೆರಳಿದ್ದು,
ಅಲ್ಲಿ ವಾರ್ಡಗಳ ಒಳಗಡೆ ಹೋಗಿ ನಿದ್ದೆಗೆ ಜಾರಿರುವ ರೋಗಿಗಳ ಬಂದ ಹಣ ಮೊಬೈಲ್ ಮತ್ತು ಬೆಲೆ ಬಾಳುವ ವಸ್ತುಗಳನ್ನ ಎಗರಿಸುವ ಯತ್ನ ಮಾಡಿದ್ದಾನೆ. ಆದ್ರೆ ಈ ವೇಳೆ ರೋಗಿಯೊಬ್ಬರು ಎಚ್ಚೆತ್ತು ಯಾರು ನೀನು ಅಂತಿದ್ದಂತೆ ನಾನು ಆಸ್ವತ್ರೆ ಸಿಬ್ಬಂದಿ ಡಾಕ್ಟರ್ ಅಂತೆಲ್ಲ ಹೇಳಿ ಅಲ್ಲಿಂದ ಹೊರಗಡೆ ಬಂದಿದ್ದಾನೆ. ಹೀಗಾಗೆ ಅನುಮಾನಗೊಂಡ ಜನರು ಆರೋಪಿಯನ್ನ ಹಿಂಬಾಲಿಸಿದಾಗ ಕಳ್ಳತನ ಮಾಡಲು ಬಂದಿರುವುದು ಗೊತ್ತಾಗಿದ್ದು ಕೂಡಲೆ ಆರೋಪಿಯನ್ನ ಜನರು ಹಿಡಿದುಕೊಂಡಿದ್ದಾರೆ.
ಆರೋಪಿಯನ್ನ ಹಿಡಿದುಕೊಂಡು ಪ್ರಶ್ನಿಸಿದ ಆಸ್ವತ್ರೆಯ ಒಳ ರೋಗಿಗಳು ನಂತರ ಆರೋಫಿಯನ್ನ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದು ಪೊಲೀಸರು ಆರೋಫಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕಳೆದ ಹಲವು ತಿಂಗಳುಗಳಿಂದ ಇದೇ ರೀತಿ ಆಸ್ವತ್ರೆಗೆ ಆಗಾಗ ರೊಗಿಗಳ ಸೋಗಿನಲ್ಲಿ ಬರ್ತಿರುವ ಕಳ್ಳರು ರೋಗಿಗಳ ಬ್ಯಾಗ್ ಮೊಬೈಲ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ಖದ್ದು ಎಸ್ಕೇಪ್ ಆಗ್ತಿದ್ದಾರಂತೆ.
ಜೊತೆಗೆ ಆಸ್ವತ್ರೆಯಲ್ಲಿ ರಾತ್ರಿ ವೇಳೆ ನಾಲ್ಕು ಜನ ಸೆಕ್ಯೂರಿಟಿ ಗಾರ್ಡಗಳು ಕಾಟಾಚಾರಕ್ಕೆ ಕೆಲಸ ಮಾಡ್ತಿರುವ ಕಾರಣ ಪದೇ ಪದೇ ಈ ರೀತಿಯ ಕಳ್ಳತನ ಕೃತ್ಯಗಳು ನಡೆಯುತ್ತಿದ್ದು ಕಳ್ಳರ ಹಾವಳಿಗೆ ಬ್ರೇಕ್ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಟ್ಟಾರೆ ರೋಗ ಗುಣವಾಗಲಿ ಅಂತ ಕಷ್ಟದಲ್ಲಿ ಆಸ್ವತ್ರೆಗೆ ಬಂದಿದ್ದ ರೋಗಿಗಳ ಬಳಿಗೆ ರೋಗಿಯ ಸೋಗಿನಲ್ಲಿ ಬಂದು ಬೆಲೆ ಬಾಳುವ ವಸ್ತುಗಳನ್ನ ಖದಿಯುತ್ತಿದ್ದ ಆರೋಪಿಯನ್ನ ಜನರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಇತ್ತೀಚೆಗೆ ಆಸ್ವತ್ರೆಗಳಲ್ಲು ಇಂತಹ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಫಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಬುದ್ದಿ ಕಲಿಸುವ ಕೆಲಸ ಮಾಡಬೇಕಿದೆ..