ಕಲಘಟಗಿ: ಧಾರವಾಡ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸಂಬಂಧಿಸಿದಂತೆ ಕಲಘಟಗಿ, ಹುಬ್ಬಳ್ಳಿ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ಯ ಅಧ್ಯಕ್ಷರ ನಾಮನಿರ್ದೆಶನ ಮಾಡಿ ಅನುಮೋದಿಸಲಾಗಿದ್ದು, ಕಲಘಟಗಿ ತಾಲೂಕು ಕಸಾಪ ಘಟಕದ ಅಧ್ಯಕ್ಷರಾಗಿ ಮುಕ್ಕಲ್ಲ ಗ್ರಾಮದ ನಿವಾಸಿ, ನ್ಯಾಯವಾದಿ, ಪತ್ರಕರ್ತ ರಮೇಶ ಸೋಲಾರಗೊಪ್ಪ ಅವರನ್ನು ನೇಮಕ ಮಾಡಲಾಗಿದೆ.
BSNL 5G: BSNL ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್..! ಇದೇ ದಿನ BSNL 5G ಸೇವೆ ಆರಂಭ – ಇಲ್ಲಿದೆ ಮಾಹಿತಿ
ಈ ಹಿಂದಿನ ಅಧ್ಯಕ್ಷರಾಗಿದ್ದ ಈಶ್ವರ ಜವಳಿ ಅವರು ರಾಜೀನಾಮೆ ನೀಡಿದ ಹಿನ್ನೆಲೆ ತೆರವಾದ ಅಧ್ಯಕ್ಷ ಸ್ಥಾನಕ್ಕೆ ರಮೇಶ ಸೋಲಾರಗೊಪ್ಪ ಅವರನ್ನು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಸೋಲಾರಗೊಪ್ಪ ಅವರಿಗೆ ಸಾಹಿತಿಗಳು, ಕನ್ನಡ ಪರ ಸಂಘಟನೆಗಳು ಅಭಿನಂದಿಸಿವೆ.
ವರದಿ :ಮಾರುತಿ ಲಮಾಣಿ