ಬೆಂಗಳೂರು: ಅಣ್ಣತಮ್ಮಂದಿರ ಕೈವಾಡ ಎಂದು ಮುನಿರತ್ನ ಹೇಳಿಕೆ ವಿಚಾರ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ನನಗೆ ಈ ವಿಚಾರವೇ ಗೊತ್ತಿಲ್ಲ ಎಂದು ತಳ್ಳಿ ಹಾಕಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಇಂಥ ವಿಚಾರ ಎಲ್ಲಾ ಬಿಜೆಪಿಯವ್ರೇ ಮಾಡೋದುಅಶೋಕ್, ವಿಜಯೇಂದ್ರ ಎಲ್ಲಾ ದೊಡ್ಡ ದೊಡ್ಡ ನಾಯಕರಿದ್ದಾರೆ ದಲಿತ, ಒಕ್ಕಲಿಗೆ ಬಗ್ಗೆ ಮಾತಾಡಿರೋದು ಸರಿಯೋ ತಪ್ಪೋ ಸಮುದಾಯದ ಮುಖಂಡರು, ಹಿರಿಯರು ಮಾತಾಡ್ತಾರೆ ಮುನಿರತ್ನ ಬಂಧನ ಬಗ್ಗೆ ನನಗೆ ಗೊತ್ತಿಲ್ಲ ನೀವು ಟಿವಿಯಲ್ಲಿ ತೋರಿಸಿದ್ದು ನೋಡಿದ್ದೇನೆ ಎಂದರು.
ಹಾಗೆ ಅಮೆರಿಕದಲ್ಲಿ ರಾಹುಲ್ ಗಾಂಧಿ ಭೇಟಿ ವಿಚಾರ ನೋಡ್ರಿ ನಮ್ ಪಾರ್ಟಿ ಲೀಡರ್ ನ ಭೇಟಿ ಮಾಡಿದ್ದೀನಿ ಅದಕ್ಕೆ ಯಾವೋನ್ ಪರ್ಮಿಷನ್ ತಗೋಬೇಕು ಏನ್ ಚರ್ಚೆ ಮಾಡಿದ್ವಿ ಅಂತಾ ನಿಮ್ಮತ್ರ ಹೇಳೋಕಾಗುತ್ತಾ? ನನ್ನ ತಮ್ಮ, ತಂಗಿ ಬಳಿ ಮಾತಾಡೋದೆಲ್ಲಾ ಹೇಳೋಕಾಗುತ್ತಾ?