ಇಂಟರ್ನೆಟ್ ಎನ್ನುವ ಮಾಯಾಜಾಲ ಎಲ್ಲೆಡೆ ವಿಶ್ವವ್ಯಾಪಿಯಾಗಿದೆ. ಕಾಡು-ಮೇಡು, ಗುಡ್ಡಗಾಡು, ಹಳ್ಳಿ, ನಗರ ಹೀಗೆ ಎಲ್ಲೆಂದರಲ್ಲಿ ಅಂತರ್ಜಾಲ ಹಬ್ಬಿದೆ. ಈಗ ಅಂತರ್ಜಾಲ ಜನರ ನಿತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ಅದರಲ್ಲು ಮೊಬೈಲ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಹೀಗೆ ಬದುಕಿನುದ್ದಕ್ಕೂ ಅಂತರ್ಜಾಲದೊಂದಿಗಿನ ಸಂಬಂಧ ಬೆಸೆದುಕೊಂಡಿದೆ. ಜೊತೆ ಜೊತೆಗೆ ಅನೇಕ ಮೋಸ, ವಂಚನೆ ಸೇರಿದಂತೆ ಕ್ರಿಮಿನಲ್ ದಂಧೆಗಳು ಈಗ ಇಂಟರ್ನೆಟ್ ಜೊತೆಗೆ ಬೆಸೆದುಕೊಂಡು ಬಿಟ್ಟಿವೆ. ಜನರಿಗೆ ವಿಡಿಯೋ ಕರೆಗಳನ್ನ ಮಾಡಿ ವಂಚನೆ ಮಾಡುವ ಜಾಲ ಈಗ ಹೆಚ್ಚಾಗುತ್ತಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…
ಹೌದು ಮುಂಬೈ ಕ್ರೈಂ ಬ್ರಾಂಚ್ ಪೋಲಿಸರ ಹೆಸರಲ್ಲಿ ಮೋಸ ಮಾಡುವ ಯತ್ನ ನಡೆದಿದೆ. ಇನ್ನು ಇತ್ತೀಚೆಗೆ ಕರೆಗಳನ್ನ ಮಾಡಿ ಓಟಿಪಿಗಳನ್ನ ಪಡೆದು ಹಣ ವಂಚನೆ ಮಾಡ್ತಿದ್ದ ಖದೀಮರೀಗ ಬೇರೆ ಮಾರ್ಗವನ್ನೆ ಹಿಡಿದಿದ್ದಾರೆ. ತಾವು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಎಂದು ವಿಡಿಯೋ ಕರೆ ಮಾಡಿ ಬೆದರಿಸುವ ದಂಧೆ ಶುರುವಾಗಿದೆ. ವಿಡಿಯೋ ಕರೆ ಮಾಡುವ ಖದೀಮರು ಪೊಲೀಸರ ವೇಗದಲ್ಲಿದ್ದು, ನಿಮ್ಮ ಮೊಬೈಲ್ ನಂಬರ್ ಮೇಲೆ ಕೇಸ್ ಇದೆ. ವಿಚಾರಣೆಗೆ ಹಾಜರಾಗಲು ಮುಂಬೈಗೆ ಬನ್ನಿ ಎಂದು ಕರೆ ಮಾಡುತ್ತಾರೆ. ನಾವು ಬೇರೆ ರಾಜ್ಯದಲ್ಲಿರೋದು ಅಂದಾಗ, ಹಾಗಿದ್ರೆ ವಿಡಿಯೋ ಕಾಲ್ ಮೂಲಕವೇ ವಿಚಾರಣೆಗೆ ಹಾಜರಾಗಿ ಎನ್ನುತ್ತಾರೆ. ವಿಚಾರಣೆ ಹೆಸರಲ್ಲಿ ಬೆದರಿಸುವ ನಕಲಿ ಪೊಲೀಸ್ ಹಣಕ್ಕೆ ಬೇಡಿಕೆ ಇಡುತ್ತಾರೆ.
Headache: ಪದೇ ಪದೇ ತಲೆನೋವು ಕಾಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ ತಲೆನೋವು ಮಂಗಮಾಯವಾಗುತ್ತೆ!
ಅಲ್ಲದೆ ನಿಮ್ಮ ಬ್ಯಾಂಕ್ ಖಾತೆಗಳನ್ನೆ ಮುಟ್ಟುಗೋಲು ಹಾಕಲಾಗುವುದು ಎಂದು ನಕಲಿ ಪೊಲೀಸ್ ವೇಶದಲ್ಲಿರೋ ಖದೀಮರಿಂದ ಧಮ್ಕಿ ಬರುತ್ತೆ. ಅಪ್ಪಿ ತಪ್ಪಿ ಅವರು ಹೇಳುವ ಕೆಲಸಕ್ಕೆ ಒಪ್ಪಿಕೊಂಡರೆ ಹಣವನ್ನ ಬಾಚಿ ವಿಡಿಯೋ ಕರೆ ಕಟ್ ಮಾಡಿ ಮಂಗ ಮಾಯವಾಗ್ತಾರೆ. ಇನ್ನೂ ಇದೆ ರೀತಿ ಗುಮ್ಮಟನಗರಿ ವಿಜಯಪುರ ನಗರದ ನಿವಾಸಿ ಸಂತೋಷ ಚೌಧರಿ ಎಂಬಾತನಿಗೆ ವಿಡಿಯೋ ಕರೆ ಮಾಡಿದ ಗ್ಯಾಂಗ್ ತಾವು ಮುಂಬೈ ಅಂದೇರಿ ನಗರಿ ಪೊಲೀಸರು ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಸಿಮ್ ಆಧಾರ್ ಕಾರ್ಡ್ಗೆ ಲಿಂಕ್ ಇದೇಯಾ ಎಂದು ವಿಚಾರಿಸಿದ್ದಾರೆ. ಹುಂ ಎಂದಾಗ ನಿಮ್ಮ ಮೊಬೈಲ್ ನಂಬರ್ ಮೇಲೆ ಮುಂಬೈನ ಅಂದೇರಿ ನಗರಿ ಪೊಲೀಸ್ ಠಾಣೆಯಲ್ಲಿ ಬರೊಬ್ಬರಿ 17 ಕೇಸ್ ದಾಖಲಾಗಿವೆ ಎಂದಿದ್ದಾರೆ. ಅಲ್ಲದೆ ಆಧಾರ್ ಕಾರ್ಡ್ ನಂಬರ್, ಓಟಿಪಿ ವಿಚಾರಿಸಿದ್ದಾರೆ. ಕೊಡಲು ನಿರಾಕರಿಸಿದ ಸಂತೋಷಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ವಾಗ್ವಾದ ಉಂಟಾಗಿ ಸಂತೋಷ ವಿಡಿಯೋ ಕರೆ ಕಟ್ ಮಾಡಿದ್ದಾನೆ…
ಇನ್ನೂ ವಾಪಸ್ ಕರೆ ಮಾಡಿದ ಖದೀಮರು ಆಧಾರ್ ಲಿಂಕ್ ಇರೋ ನಂಬರ್ ಗೆ ಓಟಿಪಿ ಬರುತ್ತೆ ಲಿಂಕ್ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಪೊಲೀಸರು ಎಂದಾಗ ಆರಂಭದಲ್ಲಿ ಹೆದರಿದ ಸಂತೋಷ ಬಳಿಕ ಯಾವಾಗ ಓಟಿಪಿ, ಬ್ಯಾಂಕ್ ಖಾತೆಗಳ ಬಗ್ಗೆ ವಿಚಾರಿಸಲು ಆರಂಭಿಸಿದ್ದಾರೋ ಆಗ ಅಲರ್ಟ್ ಆಗಿದ್ದಾನೆ. ಕರೆ ಕಟ್ ಮಾಡಿ ಪ್ರಾಂಡ್ ನಿಂದ ಬಚಾವ್ ಆಗಿದ್ದಾನೆ. ಈ ಹಿಂದೆ ಕೂಡಾ ವಿಜಯಪುರ ನಗರದಲ್ಲಿ ಖ್ಯಾತ ವೈದ್ಯರೊಬ್ಬರಿಗೆ ಹೀಗೆ ಬೆದರಿಕೆ ಹಾಕಿ ಸುಮಾರು 50 ಲಕ್ಷದಷ್ಟು ಹಣ ದೋಚಲಾಗಿತ್ತು. ಹಾಗೇ ಈ ಯತ್ನವನ್ನು ಕೂಡಾ ಖದೀಮರು ಮಾಡಿದ್ದಾರೆ. ಇನ್ನೂ ಸಂತೋಷ ಚೌದರಿ ಈಗಾಗಲೇ ಸಿಇಎನ್ ಪೋಲಿಸ್ ಠಾಣೆಯಲ್ಲಿ ಈ ವಿಚಾರವಾಗಿ ದೂರು ನೀಡಿದ್ದಾರೆ…
ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ, ಸಂತೋಚ ಚೌದರಿ ವಂಚಕರ ಜಾಲದಿಂದ ಬಚಾವಾಗಿದ್ದಾರೆ, ಆದರೆ ಅವರ ನಡುವಿನ ಸಂಭಾಷಣೆ ಸಂಪೂರ್ಣ ರಿಕಾರ್ಡ ಮಾಡಿಕೊಂಡು ಪೋಲಿಸರಿಗೆ ನೀಡಿದ್ದಾರೆ. ಸದ್ಯ ಸಿಇಎನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲಿಸರು ತನಿಖೆ ಆರಂಭಸಿದ್ದಾರೆ. ಹೀಗೆ ವಂಚನೆ ಮಾಡುವ ಗ್ಯಾಂಗ್ ಹೊಸ ಹೊಸ ಮಾರ್ಗ ಹುಡುಕಾಡುತ್ತಿದ್ದು, ಈ ತರಹ ತಮಗೂ ಕರೆ ಬಂದರೆ ತಕ್ಷಣ ಹತ್ತಿರದ ಠಾಣೆ ಹೋಗಿ ದೂರನ್ನು ನೀಡಬೇಕು ಎಂಬುದೇ ನಮ್ಮ ಒತ್ತಾಯ..