ಮಂಡ್ಯ: ಕಳೆದ ಒಂದೂವರೆ ವರ್ಷದಲ್ಲಿ ಮಂಡ್ಯ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠ ಒಂದೂವರೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಆ ಹಣದಿಂದ ಕಾಮಗಾರಿಗಳು ನಡೆಯುತ್ತಿದೆ’ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 15 ಬಜೆಟ್ ಮಂಡಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಇಲಾಖೆಯ ಒಂದು ಕಾಮಗಾರಿ ನಿಲ್ಲಿಸಲು ಆದೇಶ ಮಾಡಲಿಲ್ಲ. ಅನುದಾನಕ್ಕೆ ಕೊರತೆ ಮಾಡಲಿಲ್ಲ ಎಂದು ಹೇಳಿದರು.
Onam 2024: ಓಣಂ ಹಬ್ಬಆಚರಿಸುವ ವಿಧಾನ, ಹಿಂದಿನ ಮಹತ್ವ ಮತ್ತು ವಿಶೇಷತೆ ಏನು ಗೊತ್ತಾ..?
ಮೈಷುಗರ್ ಕಾರ್ಖಾನೆ ಅಭಿವೃದ್ಧಿಗೆ 50 ಕೋಟಿ ಅನುದಾನ ನೀಡಿದ್ದಾರೆ. ಕೊನೆಯ ಭಾಗಕ್ಕೆ ನೀರಿಲ್ಲ ಅಂತ ಹೇಳುತ್ತಿದ್ದೀರಿ. ಆದರೆ, ನರೇಂದ್ರಸ್ವಾಮಿ ಕೊನೆಯ ಭಾಗಕ್ಕೆ ನೀರು ತಂದಿದ್ದಾರೆ. ಅವರ ಅಭಿವೃದ್ಧಿ ಕೆಲಸ ಸಹಿಸದೇ ಡಾ.ಅನ್ನದಾನಿ ಅವರು ಪ್ರತಿಭಟನೆ ನಡೆಸುತ್ತಾರೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅವರು ಮಾತನಾಡುವ ರೀತಿ, ನಡೆದುಕೊಳ್ಳುವ ರೀತಿ ಸರಿಯಾಗಿರಬೇಕು. ಅವರ ಟೀಕೆ, ಟಿಪ್ಪಣಿ ಜನರಿಗೆ ಸಮಾಧಾನವಾದರೆ ನಾವು ಏನು ಮಾತನಾಡುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.