ರಾಮನಗರ:-ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣ ನೀಡಿ ಜಿಲ್ಲಾಧಿಕಾರಿಗೆ ಗುತ್ತಿಗೆದಾರ ವಿಶ್ವನಾಥ್ ಅವರು ಹೇಳಿದ್ದಾರೆ.
ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಶ್ವೇತ ಬಾಯಿಯವರ ಲಂಚಗುಳಿ ಚಿತ್ರೀಕರಣ ಒಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ನಡೆಯುತ್ತಿದ್ದು.. ಸುದ್ದಿ ಪ್ರಸಾರದ ಬೆನ್ನಲ್ಲೇ ಹಾರೋಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತಿಗೆದಾರ ವಿಶ್ವನಾಥ್ ರವರು, ಮೂಲತಹ ನಾನು ಆನೇಕಲ್ ತಾಲೂಕಿನ ನಿವಾಸಿಯಾಗಿದ್ದು, ನಾನು ಈಶ ಎಂಟರ್ಪ್ರೈಸಸ್ ಎಂಬ ಕೇಬಲ್ ಅಳವಡಿಕೆಯ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು, ನಾನೆ ವಿಡಿಯೋ ಚಿತ್ರೀಕರಣ ಮಾಡಿರುತ್ತೇನೆ.
ಹಾರೋಹಳ್ಳಿ ಪಟ್ಟಣದಲ್ಲಿ ಕೇಬಲ್ ಅಳವಡಿಕೆಯ ಬಗ್ಗೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ವೇತಾ ಬಾಯಿ ಅವರ ಜೊತೆ ಮಾತುಕತೆ ನಡೆಸುತ್ತಿರುವಂತಹ ಸಂದರ್ಭದಲ್ಲಿ ಕೇಬಲ್ ಅಳವಡಿಕೆ ಬಗ್ಗೆ ಪಟ್ಟಣ ಪಂಚಾಯಿತಿಗೆ ಕೇಬಲ್ ಅಳವಡಿಕೆಯ ತೆರಿಗೆ ಹಣದ ಬಗ್ಗೆ ಮಾತುಕತೆ ನಡೆಸಿರುತ್ತೇನೆ.
ಈ ಹಿಂದೆ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯದ ಶ್ವೇತಾ ಬಾಯಿಯವರು ಆನೇಕಲ್ ತಾಲೂಕಿನ ಚಂದಾಪುರ ಮತ್ತು ಅತ್ತಿಬೆಲೆಯಲ್ಲಿ ಮುಖ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು, ನನಗೆ ಚಿರಪರಿಚಿತರಾಗಿರುತ್ತಾರೆ. ಆದ್ದರಿಂದ ಮುಖ್ಯ ಅಧಿಕಾರಿ ಶ್ವೇತಾ ಬಾಯಿ ರವರನ್ನು ಹಾಸ್ಯ ಮಾಡುವುದಕ್ಕಾಗಿ ಕೇಬಲ್ ಅಳವಡಿಕೆಯ ತೆರಿಗೆಯ ಹಣದ ಬಗ್ಗೆ ಮಾತನಾಡುವ ದೃಶ್ಯದ ಬಗ್ಗೆ ಚಿತ್ರೀಕರಣ ಮಾಡಿರುತ್ತೇನೆ.
ಆದರೆ ಕಳೆದ ಮೂರು ದಿನಗಳಿಂದ ನನ್ನ ಮೊಬೈಲ್ ಹ್ಯಾಕ್ ಆಗಿದ್ದು, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ, ನಾನು ಯಾವುದೇ ಮಾಧ್ಯಮದವರಿಗೆ ಸುದ್ದಿ ಮಾಡಬೇಕೆಂದು ಚಿತ್ರೀಕರಣವನ್ನು ಕೂಡ ಕಳಿಸಿರುವುದಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ಲಂಚದ ಬಗ್ಗೆ ಮಾತುಕತೆ ನಡೆದಿರುವುದಿಲ್ಲ ಕೇವಲ ಪಂಚಾಯಿತಿಯ ಅನುಮತಿಯ ತೆರಿಗೆ ಹಣದ ಬಗ್ಗೆ ಅಷ್ಟೇ ಮಾತುಕತೆ ನಡೆದಿರುತ್ತದೆ.
ಆದರೆ ಮಾಧ್ಯಮದವರು ಸಂಪೂರ್ಣ ಚಿತ್ರೀಕರಣವನ್ನು ಪ್ರಸಾರ ಮಾಡದೆ ಕೇವಲ ಹಣದ ಬಗ್ಗೆ ಮಾತಾಡಿರುವ ಒಂದು ವಿಡಿಯೋ ತುಣುಕನ್ನು ಮಾತ್ರ ಪ್ರಸಾರ ಮಾಡುತ್ತಿದ್ದಾರೆ. ಇದರ ಬಗ್ಗೆ ರಾಮನಗರ ಜಿಲ್ಲಾಧಿಕಾರಿಯವರಿಗೂ ಕೂಡ ಸುಳ್ಳು ವದಂತಿಯ ಬಗ್ಗೆ ಮನವಿ ಪತ್ರವನ್ನು ನೀಡಿರುತ್ತೇನೆ. ಮಾಧ್ಯಮದವರು ದಯವಿಟ್ಟು ಸುಳ್ಳು ವದಂತಿಯನ್ನು ಹಬ್ಬಿಸಬೇಡಿ ಎಂದು ಗುತ್ತಿಗೆದಾರ ವಿಶ್ವನಾಥ್ ಮನವಿ ಮಾಡಿದರು.