ಬೆಂಗಳೂರು: ಪತ್ನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಥಳಿಸಿ ಕಿರುಕುಳ ನೀಡುತ್ತಿರುವ ಸಂಬಂಧ ಪತಿ ಮತ್ತು ಆತನ ತಂದೆ ತಾಯಿ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರದಾರರಾದ ತಸ್ಲಿಂಬಾನು(21) ದೂರಿನ ಆಧಾರದ ಮೇಲೆ ಪತಿ ಸದ್ದಾಂ ಹುಸೇನ್, ಆತನ ತಂದೆ ರಿಯಾಜ್ ಖಾನ್,ತಾಯಿ ತಬಸ್ಸೂಮ್ ಖಾನಂ ಅವರ ಮೇಲೆ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲವು ಬಾರಿ ಠಾಣೆ ದೂರು ನೀಡಲು ಹೋದ್ರೂ ಪೊಲೀಸರು ಪ್ರಕರಣ ದಾಖಲಿಸದ ಸಂಬಂಧ ಇಂದು ವಿಜಿನಪುರದಿಂದ ರಾಮಮೂರ್ತಿ ನಗರ ಠಾಣೆಯವರೆಗೆ ಕಾಲ್ನಡಿಗೆ ನಡೆಸಿದ ಬಳಿಕ ದೂರು ದಾಖಲಿಸಿಕೊಂಡಿದ್ದಾರೆ.. ಹಾವೇರಿ ಜಿಲ್ಲೆಯ ಸವಣೂರು ಮೂಲದ ನಿವಾಸಿ ತಸ್ಲಿಂಬಾನು ಕೆಆರ್ ಪುರದ ವಿಜಿನಾಪುರ ನಿವಾಸಿ ಸದ್ದಾಂ ಹುಸೇನ್ ಎಂಬಾತನೊಂದಿಗೆ ವಿವಾಹವಾಗಿದ್ದರು, ದಂಪತಿ ಕೆಲ ತಿಂಗಳಿನಿಂದ ಅನ್ಯೋನವಾಗಿದ್ದರು, ನಂತರ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ ತನ್ನ ಪತಿ ದಿನನಿತ್ಯ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ..
ಈ ಮನೆಮದ್ದು ಬಳಸಿದ್ರೆ ಆಮೇಲೆ ಮನೆಯಲ್ಲಿ, ಒಂದೂ ಹಲ್ಲಿಗಳು ಇರಲ್ಲ ನೋಡಿ!
ತನ್ನ ಗಂಡ ಕೆಲಸಕ್ಕೆ ಹೋದಾಗ ಮಾವ ರಿಯಾಜ್ ಖಾನ್ ಮೈಕೈ ಮುಟ್ಟಿ ಅಸಭ್ಯವಾಗಿ ನಡೆದಿಕೊಂಡಿದ್ದು, ಈ ಬಗ್ಗೆ ಅತ್ತೆ ಮತ್ತು ಗಂಡನಿಗೆ ತಿಳಿಸಿದಾಗ ನಿನ್ನನ್ನು ದುಡ್ಡು ಕೊಟ್ಟು ಖರೀದಿಸಿಕೊಂಡು ಬಂದಿದ್ದೇವೆ ನಿಮ್ಮ ಮಾವ ಹೇಳಿದಂತೆ ಕೇಳು ಇಲ್ಲದಿದ್ದರೆ ತವರು ಮನೆಗೆ ಹೋಗು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಮಾವ ರಿಯಾಜ್ ಖಾನ್ ಉದ್ದೇಶಪೂರ್ವಕವಾಗಿ ಸ್ನಾನ ಮಾಡುವಾಗ ಬೆನ್ನು ಉಜ್ಜುಲು ಕರೆಯುತ್ತಾರೆ.. ಅಲ್ಲದೇ ಕಾಲು ನೋವಿದೆ ಎಣ್ಣೆ ಹಚ್ಚುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ..