ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕವಲಗಿ ಗ್ರಾಮದ ಬಳಿ, ರೈತ ತೋಟದಲ್ಲಿದ್ದ ಒಣ ಮೇವನ್ನ ಜೋಡೆತ್ತಿನ ಬಂಡಿಯಲ್ಲಿ ಮನೆಗೆ ತರುವ ಸಂದರ್ಭದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಬೆದರಿದ ಎತ್ತುಗಳು ಬಂಡಿ ಸಮೇತ ಪಕ್ಕದ ಬಾವಿಗೆ ಬಿದ್ದು ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಈ ಮನೆಮದ್ದು ಬಳಸಿದ್ರೆ ಆಮೇಲೆ ಮನೆಯಲ್ಲಿ, ಒಂದೂ ಹಲ್ಲಿಗಳು ಇರಲ್ಲ ನೋಡಿ!
ತನ್ನ ಕೃಷಿ ಕಾರ್ಯಕ್ಕೆ ಬೆನ್ನಲುಬಾದ ಜೋಡೆತ್ತುಗಳನ್ನ ಕಳೆದುಕೊಂಡ ರೈತ ರಾಮಣ್ಣ ದಳವಾಯಿ ಕಣ್ಣಿರು ಹಾಕುವಂತಾಗಿದೆ. ರೈತನಿಗೆ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಸಹಾಯ ಹಸ್ತ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ ಹಾಗೂ ಪಿಎಸ್ಐ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.