ಬೆಂಗಳೂರು:- ಜಿಎಸ್ಟಿ ಅಧಿಕಾರಿಗಳ ಬಂಧನ ಕೇಸ್ ಗೆ ಸಂಬಂಧಿಸಿದಂತೆ ಮಹಿಳಾ ಅಧಿಕಾರಿ ಮನೆಯಲ್ಲಿ 32 ಮೊಬೈಲ್ ಪತ್ತೆಯಾಗಿದೆ.
ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಕಾರಿನ ಮೇಲೆ ಬಿದ್ದ ಲಾರಿ, ಚಿಕ್ಕಬಳ್ಳಾಪುರದ ಮೂವರು ದುರ್ಮರಣ!
ಆಗಸ್ಟ್ 30 ರಂದು ಉದ್ಯಮಿ ಕೇಶವ್ ಎಂಬುವರ ಮನೆ ಮೇಲೆ ಜಿಎಸ್ಟಿ ಅಧಿಕಾರಿಗಳು ದಾಳಿ ಮಾಡಿದ್ದರು. “ನಾವು, ಇಡಿ ಮತ್ತು ಜಿಎಸ್ಟಿಯವರು ಅಂತ ದಾಳಿ ಮಾಡಿದ ಅಧಿಕಾರಿಗಳು, ಉದ್ಯಮಿ ಕೇಶವ್ ಅವರ ಶೋರೂಂ, ಮನೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದರು.
ಪರಿಶೀಲನೆ ನಡೆಸಿದ ಅಧಿಕಾರಿಗಳು, ಕೇಶವ್ ಸೇರಿದಂತೆ ಅವರ ಮನೆಯಲ್ಲಿದ್ದ ನಾಲ್ವರನ್ನು ಬಲವಂತವಾಗಿ ವಶಕ್ಕೆ ಪಡೆದು ಜೀವನ್ ಭೀಮಾನಗರ, ಇಂದಿರಾನಗರದ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದರು. ರಾತ್ರಿ ಪೂರ್ತಿ ಕೂಡಿ ಹಾಕಿ ಮೂರು ಕೋಟಿ ಹಣ ನೀಡುವಂತೆ ಉದ್ಯಮಿ ಕೇಶವ್ ಅವರ ಮೇಲೆ ಹಲ್ಲೆ ಮಾಡಿದ್ದರು.
ಈ ವೇಳೆ ಭಯಗೊಂಡ ಉದ್ಯಮಿ ಕೇಶವ್, ರೋಷನ್ ಜೈನ್ ಎಂಬುವರಿಗೆ ವಾಟ್ಸಪ್ ಕಾಲ್ ಮಾಡಿ ಮೂರು ಕೋಟಿ ಹಣ ತರುವಂತೆ ಹೇಳಿದ್ದರು. ಮರುದಿನ ರೋಷನ್ ಜೈನ್ ಅವರು ಮೂರು ಕೋಟಿ ಬದಲಿಗೆ ಒಂದುವರೆ ಕೋಟಿ ಹಣ ತಂದುಕೊಟ್ಟಿದ್ದರು. ಬಳಿಕ ಜಿಎಸ್ಟಿ ಅಧಿಕಾರಿಗಳು ಉದ್ಯಮಿ ಕೇಶವ್ ಮತ್ತು ಅವರ ಕಡೆಯವರನ್ನು ಬಿಟ್ಟು ಕಳುಹಿಸಿದ್ದರು.
ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ತನಿಖೆಗೆ ಇಳಿದ್ದಿದ್ದರು. ತನಿಖೆ ವೇಳೆ, ಈ ನಾಲ್ವರು ಜಿಎಸ್ಟಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ದಾಳಿ ನಡೆಸಿ ಒಂದುವರೇ ಕೋಟಿ ಹಣ ಪಡೆದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಂಟಲಿಜೆನ್ಸ್ ಆಫೀಸರ್ ಸೊನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮೋನೊಜ್ ಸೈನಿ, ಎಸ್ಪಿ ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ನಾಗೇಶ್ ಬಾಬು ಎಂಬ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು.
ಬಳಿಕ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಬಂಧಿತ ಅಧಿಕಾರಿಗಳ ನಿವಾಸದಲ್ಲಿ ತಪಾಸಣೆ ನಡೆಸಿದರು. ಮಹಿಳಾ ಅಧಿಕಾರಿ ಸೋನಾಲಿ ಅವರ ನಿವಾಸದಲ್ಲಿ 32 ಮೊಬೈಲ್, 50 ಚೆಕ್ ಬುಕ್ ಮತ್ತು ಎರಡು ಲ್ಯಾಪ್ ಟಾಪ್ಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ.