ಬೆಂಗಳೂರು:- ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಅಪರೂಪದ ಹಾವು ಕಾಣಿಸಿಕೊಂಡ ಘಟನೆ ಜರುಗಿದೆ.
ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್ ಆರೋಪ: ವರುಣ್ ಆರಾಧ್ಯ ಹೇಳಿದ್ದೇನು!?
ಎರಡು ತಲೆ ಹಾವು ಅಥವಾ ಮಣ್ಣವು ಅಂತ ಕರೆಯಲ್ಪಡುವ ಈ ಹಾವು ಅದೃಷ್ಟ ಅಂತ ನಂಬಲಾಗಿದೆ. ಹಾಗಾಗಿ ಹೆಚ್ಚು ಕಳ್ಳ ಸಾಗಣಿಕೆ ಸಹ ನಡೆಯುತ್ತದೆ. ಹಾವು ಕಂಡ ತಕ್ಷಣ ಆಟೋ ಚಾಲಕರು ಇಳಿದು ರಕ್ಷಣೆ ಮಾಡಿದ್ದಾರೆ.
ಕೂಡಲೇ ವನ್ಯಜೀವಿ ಸಂರಕ್ಷಕರು ಮತ್ತು ಪ್ರಾಣಿ ಕಲ್ಯಾಣ ಪರಿಪಾಲಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯಂತೆ ರಕ್ಷಣೆ ಮಾಡಿ ಸೂಕ್ತವಾದ ಆವಾಸ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್ ಹೇಳಿದ್ದಾರೆ.