ಧಾರವಾಡ: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂಬ ಕೂಗು ಎದ್ದಿರುವ ಬೆನ್ನಲ್ಲೇ ಧಾರವಾಡದಲ್ಲಿ ಸಚಿವರಾದ ಸಂತೋಷ ಲಾಡ್ ಹಾಗೂ ಸತೀಶ ಜಾರಕಿಹೊಳಿ ತಡರಾತ್ರಿ ಭೇಟಿಯಾಗಿ ಚಹಾ ಕೂಟ ನಡೆಸುವುದರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ಧಾರವಾಡದ ಕೋರ್ಟ್ ಬಳಿಯ ಕೆಫೆಯೊಂದರಲ್ಲಿ ಒಬ್ಬರನ್ನೊಬ್ಬರು ಭೇಟಿಯಾದ ಸಚಿವರು ಚಹಾ ಸೇವನೆ ಮಾಡಿ ಕೆಲ ಹೊತ್ತು ತಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಆಮೇಲೆ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಇಬ್ಬರೂ ಸಚಿವರು ರಹಸ್ಯ ಮಾತುಕತೆ ಕೂಡ ನಡೆಸಿದ್ದಾರೆ.
40ರ ನಂತರ ತಂದೆಯಾಗೋ ಬಗ್ಗೆ ಯೋಚನೆ ಮಾಡೋ ಗಂಡಸರೇ ಒಮ್ಮೆ ಈ ಸ್ಟೋರಿ ಓದಿ.!
ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಲೆಂದೇ ಸತೀಶ ಜಾರಕಿಹೊಳಿ ಬಂದಿದ್ದರು ಎನ್ನಲಾಗಿದೆ. ಸದ್ಯ ಇಬ್ಬರೂ ಸಚಿವರ ಮಧ್ಯೆ ನಡೆದಿರುವ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಅವರು ಅಂತಹ ವಿಶೇಷ ಏನು ಇಲ್ಲ ಬಹಳ ದಿನ ಆಗಿತ್ತು ಸ್ನೇಹಿತ ಒನ್ ಬೈ ಟೂ ಕಾಫಿ ಕುಡಿದವು ಅಂತಾ ಮಾತುಕತೆಗೆ ತೇಪೆ ಹಚ್ಚುವ ಕೆಲಸ ಮಾಡಿದರು.