ಗದಗ :- ನಗರದ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗಣೇಶೋತ್ಸವವನ್ನ ಅಧ್ಧೂರಿಯಿಂದ ಆಚರಿಸಲಾಗುತ್ತಿದೆ. ಎಪಿಎಂಸಿಯ ಶ್ರೀ ಗಜಾನನ ಉತ್ಸವ ಸಮಿತಿಯಿಂದ ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗ್ತಾ ಇದ್ದು ಉತ್ತರ ಕರ್ನಾಟಕ ಭಾಗದ ರೈತರ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿರುವ ಈ ಮಾರುಕಟ್ಟೆಯಲ್ಲಿ ಗಣೇಶನ ಸಂಭ್ರಮ ಮನೆ ಮಾಡಿದೆ.
ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್; ಕಾರಣ ಇಲ್ಲಿದೆ!
ಗಣೇಶನಿಗೆ ಪ್ರತಿನಿತ್ಯ ವಿಶೇಷ ಪೂಜೆಯನ್ನ ನೆರವೇರಿಸಲಾಗ್ತಾ ಇದ್ದು ಇಂದು ರೈತ ಮಿತ್ರ ಗೋವುಗಳಿಗೆ ಪೂಜೆ ಸಲ್ಲಿಸೋ ಮೂಲಕ ಮಳೆ ಬೆಳೆ ಚೆನ್ನಾಗಿ ಆಗಲಿ, ರೋಗ ರುಜಿನಗಳು ಬಾರದಿರಲಿ, ರೈತನ ಬೆಳೆಗಳಿಗೆ ಉತ್ತದ ದರ ಸಿಗಲಿ ಅಂತಾ ಬೇಡಿಕೊಳ್ಳಲಾಯಿತು.
ಗೋವುಗಳಿಗೆ ಅಕ್ಕಿ, ಹಣ್ಣು, ಬೆಲ್ಲ, ಮೇವು ತಿನ್ನಿಸಿ ಆರತಿ ಬೆಳಗಿ ಕುಂಕುಮ ಹಚ್ಚಿ ಬೇಡಿಕೊಳ್ಳಲಾಯಿತು ಜೊತೆಗೆ ಸರ್ವ ವಿಘ್ನಗಳನ್ನೂ ನಿವಾರಿಸು ಅಂತಾ 1008 ಮೋದಕಗಳನ್ನು ನೈವೇದ್ಯವಾಗಿ ಗಣಪನಿಗೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಮಂಗಲೆಯರಿಗೆ ಉಡಿ ತುಂಬಿ ಇಷ್ಠಾರ್ಥ ಸಿಧ್ಧಿಗಾಗಿ ಶ್ರೀ ಸಿಧ್ಧಿವಿನಾಯಕನಲ್ಲಿ ಬೇಡಿಕೊಳ್ಳಲಾಯಿತು.
ಮಳೆ ಬೆಳೆಯಿಂದ ರೈತರು ಸಮೃದ್ಧರಾಗಿದ್ರೆ ಎಪಿಎಂಸಿ ವ್ಯಾಪಾರಿಗಳಿಗೂ ಉತ್ತಮ ವ್ಯಾಪಾರ ವಹಿವಾಟು ಆಗತ್ತೆ ಹೀಗಾಗಿ ರೈತರ ಸಂಕಷ್ಟ ನೀಗಲಿ ಅಂತಾ ಗಜಾನನನಲ್ಲಿ ಬೇಡಿಕೊಂಡ್ರು.