ಬೆಂಗಳೂರು:- ಆಂಧ್ರಪ್ರದೇಶದಿಂದ ಹಿಂದೂಪುರದಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಮೆಜೆಸ್ಟಿಕ್ ತಲುಪಿದೆ. ಮಾರ್ಗ ಮಧ್ಯೆ ಹಲವು ಬಾರಿ ಬಸ್ ಹಲವು ಬಾರಿ ನಿಲ್ಲಿಸಿದ್ದು ಮಾತ್ರವಲ್ಲದೇ 40 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಸಂಚಾರಿಸಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ಕೆಎಸ್ಆರ್ಟಿಸಿ ವಿರುದ್ಧ ಕಿಡಿಕಾರಿದ್ದಾರೆ.
ನಕಲಿ ಬಿಪಿಎಲ್ ಕಾರ್ಡ್ಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ!
ಮಾರ್ಗ ಮಧ್ಯೆಯೇ ಬಸ್ನ ಚಾಲಕ, ನಿರ್ವಾಹಕರನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಲಕ ತನ್ನ ಪರಿಸ್ಥಿತಿ ಹೇಳಿಕೊಂಡಿದ್ದು, ” ಬಸ್ ಹಾಳಾಗಿದ್ದು, ನನ್ನ ತಪ್ಪಿಲ್ಲ” ಎಂದಿದ್ದಾರೆ. ಹೀಗಾಗಿ, ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ ಬಸ್ ಅನ್ನು ಗುಜರಿಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಯವಿಟ್ಟು ಈ ಬಸ್ಸನ್ನು ಗುಜರಿಗೆ ಹಾಕಿ. ಸಾಮಾನ್ಯವಾಗಿ ಕೆಎಸ್ ಆರ್ ಟಿಸಿ ಬಸ್ ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿನ ಮೆಜೆಸ್ಟಿಕ್ ಗೆ ತಲುಪಲು ಎರಡೂವರೆ ಗಂಟೆ ಸಾಕು. ಟ್ರಾಫಿಕ್ ಇದ್ದರೆ ಇನ್ನೊಂದು ಇಪ್ಪತ್ತು ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಇಂದು ಈ KA. 40.F.1218 ಸಂಖ್ಯೆಯ ಕೆಎಸ್ ಆಟ್ ಟಿಸಿ ಬಸ್, ಸಂಜೆ 5.55ಕ್ಕೆ ಹಿಂದೂಪುರದಿಂದ ಹೊರಟಿತು. ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿಗೆ ಬರುವ ಹೊತ್ತಿಗೆ 8.55 ಅಂದರೆ 3 ಗಂಟೆ ತೆಗೆದುಕೊಂಡಿತು. ಮೆಜೆಸ್ಟಿಕ್ ತಲುಪಿದ್ದು, 9.15 ಮೇಲೆಯೇ.
ಮುಂದುವರೆದು ಪ್ರಯಾಣಿಕರು ಟ್ವೀಟ್ನಲ್ಲಿ ” ಬನ್ನ ಈ ಆಮೆಗತಿ ಸಂಚಾರಕ್ಕೆ ಬೇಸತ್ತ ಪ್ರಯಾಣಿಕರು ಕುಳಿತಲ್ಲೇ ಬಸ್ ಹಾಗೂ ಚಾಲಕನನ್ನು ಬೈದುಕೊಳ್ಳುತ್ತಿದ್ದರು. ಈ ಆಮೆಗತಿ ಸಂಚಾರಕ್ಕೆ ಜನರ ಆಡುಮಾತಿನಲ್ಲಿ ಹೇಳುವುದಾದರೆ ಬಸ್ ಪಿಕಪ್ ಇರಲಿಲ್ಲ. ಇಳಿಜಾರಿನಲ್ಲೂ ಬಸ್ ವೇಗ 40 ಕಿಲೊಮೀಟರ್ ದಾಟುತ್ತಿರಲಿಲ್ಲ. ಓರ್ವ ಪ್ರಯಾಣಿಕನಂತೂ ಕೂತು ಕೂತು ಕುಂಡಿ ನೋವು ಬಂತು ಎಂದು ಹೇಳಿ ಸೀಟು ಖಾಲಿಯಿದ್ದರೂ ನಿಂತೇ ಬಹಳ ಸಮಯ ಪ್ರಯಾಣಿಸಿದರು. ಬಸ್ ಹಳೆಯದು ಹಾಗೂ ನಿರ್ವಹಣೆ ಉತ್ತಮವಾಗಿರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿತ್ತು. ಪ್ರಯಾಣಿಕರ ತಾಳ್ಮೆ ಕೆಡಿಸಲಸುವ, ಸಮಯ ಹಾಳು ಮಾಡುವ ಮತ್ತು ಪ್ರಯಾಣ ದುಸ್ವಪ್ನವಾಗಿಸುವ ಇಂತಹ ಬಸ್ ಅನ್ನು ದಯವಿಟ್ಟು ಗುಜರಿಗೆ ಹಾಕಿ” ಎಂದಿದ್ದಾರೆ.
ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ ಘಟಕವು ಪ್ರಯಾಣಿಕರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದು, ” ತಮ್ಮ ದೂರನ್ನು ಪರಿಶೀಲಿಸಲಾಗಿದ್ದು, ಸದರಿ ವಾಹನವನ್ನು ದುರಸ್ಥಿಪಡಿಸಲಾಗಿರುತ್ತದೆ ” ಎಂದು ತಿಳಿಸಿದೆ.