ದಾಸರಹಳ್ಳಿ: ಕೆಲವೊಮ್ಮೆ ಬೀದಿ ಬದಿಯ ಆಹಾರ ಸೇವಿಸುವ ಮುನ್ನ ಎಚ್ಚರ ಎಚ್ಚರ ಅದರಲ್ಲೂ ರಸ್ತೆಯ ಬದಿಯ ಪಾನಿಪೂರಿ ತಿನ್ನೋ ಮುನ್ನ ಎಚ್ಚರಿಕೆ ಯಾಕೆಂದರೆ ಕೆಟ್ಟಿರುವ ಆಹಾರ ಪದಾರ್ಥ ಹಾಗೂ ಆಲೂಗೆಡ್ಡೆಯನ್ನು ಪಾನಿಪೂರಿಯಲ್ಲಿ ಹಾಕಿಕೊಡುವ ವೇಳೆ ಸಾರ್ವಜನಿಕು ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ಹೊರವಲಯ ಸೋಲದೇವನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹೊರ ರಾಜ್ಯದ ವ್ಯಕ್ತಿಗಳು ಕಡಿಮೆ ದರಕ್ಕೆ ಪಾನಿಪೂರಿಯನ್ನ ಮಾರಾಟ ಮಾಡುತ್ತಿದ್ದು ಈ ಪಾನಿಪೂರಿ ತಿಂದ್ರೆ ನಿಮ್ಮ ದೇಹಕ್ಕೆ ತರುತ್ತೆ ಆಪತ್ತು ಎದುರಾಗಿದೆ.
ಹೊರ ರಾಜ್ಯದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಪಾನಿಪೂರಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆ ಚಿಕ್ಕಬಾಣಾವಾರ ಪುರಸಭೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಪಾನಿಪೂರಿ ಗಾಡಿಯನ್ನು ವಶಕ್ಕೆ ಪಡೆದ ಪುರಸಭೆ ಅಧಿಕಾರಿಗಳು ಇತ್ತ ಕಲುಷಿತ ಆಹಾರ ಮಾರಾಟ ವಿಚಾರದಲ್ಲಿ ಸೋಲದೇವನಹಳ್ಳಿ ಪೋಲಿಸರು ಮಾರಾಟಗಾರರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.