ಗದಗ:- ನಗರದಲ್ಲಿ ಬಿಡಾಡಿ ದನಗಳ ಹಾವಳಿ ಜಾಸ್ತಿ ಆಗಿದ್ದು, ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಆರೋಪಿ ನಟ ದರ್ಶನ್ಗೆ ಕೊನೆಗೂ ಟಿವಿ ಭಾಗ್ಯ: ಬೇಡಿಕೆ ಈಡೇರಿಸಿದ ಜೈಲಾಧಿಕಾರಿಗಳು!
ಗದಗನ ಬೆಟಗೇರಿ ಮಾರ್ಕಂಡೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಪಕ್ಕದಲ್ಲಿ ಹೊರಟ್ಟಿದ್ದ ವಿದ್ಯಾರ್ಥಿನಿಯರ ಮೇಲೆ ಹೊಂಚು ಹಾಕಿ ಗೂಳಿ ದಾಳಿ ಮಾಡಿದೆ.
ಗೂಳಿ ದಾಳಿಗೆ ವಿದ್ಯಾರ್ಥಿನಿ ನೆಲಕಚ್ವಿದ್ದು, ಗೂಳಿ ದಾಳಿ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಳಿಕ ನಡುರಸ್ತೆಯಲ್ಲೇ ಎರಡು ಗೂಳಿಗಳ ಭೀಕರ ಕಾಳಗ ನಡೆದಿದ್ದು, ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಗೂಳಿಗಳ ಅಟ್ಟಹಾಸಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಕಂಗಾಲಾಗಿದ್ದಾರೆ. ಗೂಳಿ ದಾಳಿಗೆ ಕಳೆದ ತಿಂಗಳು ಓರ್ವ ವೃದ್ಧ ಮೃತ ಪಟ್ಟಿದ್ದ. ಆದರೂ ತಲೆಕೆಡಿಸಿಕೊಳ್ಳದ ನಗರಸಭೆ ಆಡಳಿತ, ಕಾಟಾಚಾರಕ್ಕೆ ನಾಲ್ಕಾರು ಬೀದಿ ದನಗಳ ಸಾಗಾಟ ಮಾಡಿ ಗಪ್ ಚುಪ್ ಆಗಿದೆ.