ಗದಗ: ಗಣೇಶ ಚತುರ್ಥಿ ಹಬ್ಬದ ಆಚರಣೆ ಗದಗ ಜಿಲ್ಲೆಯಲ್ಲೂ ಜೋರಾಗಿದೆ. ಅನೇಕ ಕಡೆಗಳ ಲಂಭೋಧರ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗದಗ ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಒಂದೇ ಸೂರಿನಡಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳು ದೊರೆಯುತ್ತವೆ.
ಇಲ್ಲಿ ತಮಗೆ ಇಷ್ಟವಾದ ವಿಘ್ನೇಶ್ವರ ನನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಹೋಗ್ತಾರೆ. ಸಾಕಷ್ಟು ಸದ್ದು, ಗದ್ದಲದೊಂದಿಗೆ ವಿನಾಯಕ ಮನೆ ಸೇರಿದನು. ಗಣೇಶ ಪೂಜೆಗೆ ಬೇಕಾದ ಫಲ ಪುಷ್ಪಗಳು, ಬಾಳೆ, ಕಬ್ಬು, ಮಾವಿನ ತೋರಣ, ಚಂಡು ಹೂವಿನ ಸಸಿಗಳ ಬೆಲೆ ಗಗನಕ್ಕೆರಿವೆ.
ಇನ್ನು ಡೆಕೋರೆಷನ್ ಸಾಮಗ್ರಿಗಳು ಬೆಲೆ ಸಹ ಕಾಸ್ಟ್ಲಿ ಆಗಿವೆ. ಮಳೆ ಬೆಳೆ ಚನ್ನಾಗಿ ಆಗಲಿ, ದೇಶ ಸುಖ ಸಮೃದ್ಧವಾಗಿರಲಿ, ನಾಡಿಗೆ ಒಳಿತು ಮಾಡಲೆಂದು ಗಣಪತಿ ಭಕ್ತರು ಭಕ್ತಿಯಿಂದ ಬೇಡಿಕೊಂಡು ಪೂಜೆ ಸಲ್ಲಿಸಿದರು.