ದಾಸರಹಳ್ಳಿ: ನೀವು ಪಾನಿಪೂರಿ ಪ್ರಿಯರಾ, ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಬೀದಿ ಬದಿಯ ಆಹಾರ ಸೇವಿಸುವ ಮುನ್ನ ನೀವು ಆದಷ್ಟು ಎಚ್ಚರದಿಂದಿರಬೇಕು.
ಕೆಟ್ಟಿರುವ ಆಹಾರ ಪದಾರ್ಥ, ಆಲೂಗೆಡ್ಡೆಯನ್ನು ಪಾನಿಪೂರಿಯಲ್ಲಿ ಹಾಕಿಕೊಡುತ್ತಾರೆ ಹುಷಾರ್. ಈ ಪಾನಿಪೂರಿ ತಿಂದ್ರೆ ನಿಮ್ಮ ದೇಹಕ್ಕೆ ಆಪತ್ತು ತರೋದ್ರಲ್ಲಿ ಡೌಟೇ ಇಲ್ಲ.
ಹೊರ ರಾಜ್ಯದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಪಾನಿಪೂರಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಚಿಕ್ಕಬಾಣಾವಾರ ಪುರಸಭೆ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಈ ವೇಳೆ ಕೆಟ್ಟಿರುವ ಆಹಾರ ಪದಾರ್ಥ ಬೆಳೆಸುತ್ತಿರೋದು ಗೊತ್ತಾಗಿದೆ. ಹೀಗಾಗಿ ಸೋಲದೇವನಹಳ್ಳಿ ಪೋಲಿಸರಿಂದ ವಶಕ್ಕೆ ಪಾನಿಪೂರಿ ಗಾಡಿಯನ್ನು ವಶಕ್ಕೆ ಪಡೆಯಲಾಗಿದೆ.