ರೇಣುಕಾಸ್ವಾಮಿಯ ಭೀಕರ ಹತ್ಯೆಯಿಂದ ಇಂದು ಅವರ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ದರ್ಶನ್ ಜೊತೆ ಸೇರಿ ಪಟ್ಟಣಗೆರೆಯಲ್ಲಿ ರಾಕ್ಷಸರಾದವರ ಕುಟುಂಬದವರು ದುಃಖದಲ್ಲಿದ್ದಾರೆ. ಅಯ್ಯೋ ನನ್ ಮಗ ದರ್ಶನ್ಗಾಗಿ ಎಂಥಾ ಕೆಲ್ಸ ಮಾಡಿ ಬಿಟ್ಟ ಅಂತಾ ಆ ಕುಟುಂಬವ್ರು ನೋವಲ್ಲಿದ್ದಾರೆ. ಇನ್ನು ದರ್ಶನ್ಗಾಗಿ ಪತ್ನಿ ವಿಜಯಲಕ್ಷ್ಮಿ ತಿರುಗಾಡದ ದೇವಸ್ಥಾನವೆ ಇಲ್ಲ. ಹಾಗೇ ದರ್ಶನ್ ಸಿನಿಮಾಗಾಗಿ ಕೋಟಿ ಕೋಟಿ ಝಣ ಝಣ ಕಾಂಚಾಣ ಹಾಕಿದ ನಿರ್ಮಾಪಕರು ದಿಕ್ಕೇ ತೋಚದ ಸ್ಥಿತಿಯಲ್ಲಿದ್ದಾರೆ. ಬಟ್, ಇಷ್ಟೆಲ್ಲ ಆಗಿದ್ದು ರೇಣುಕಾಸ್ವಾಮಿಯ ಕಿಡ್ನಾಪ್, ಮರ್ಡರ್, ಸಾಕ್ಷ್ಯನಾಶದಿಂದ.
ಕೋಟಿ ಕೋಟಿ ಸಂಭಾವನೆ ಪಡೀತಿದ್ದ ಸ್ಟಾರ್ ನಟ ದರ್ಶನ್ ಯಾಕೆ? ಈ ಕೆಲ್ಸ ಮಾಡಿದ್ರು? ಅಂತಾ ಕೇಳಿದ್ರೆ ಕೇಳಿ ಬರೋ ಉತ್ತರ ಎಲ್ಲವೂ ಪವಿತ್ರಾಗಾಗಿ. ಪೊಲೀಸ್ರು ಕೋರ್ಟ್ಗೆ ಸಲ್ಲಿಕೆ ಮಾಡಿರೋ 3991 ಪುಟಗಳ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಅಷ್ಟಕ್ಕೂ ಪವಿತ್ರಾ ಗೌಡಗೂ? ದರ್ಶನ್ಗೂ? ಏನ್ ಸಂಬಂಧ?
ಬಾಗಲಕೋಟೆ: ನಿಲ್ಲದ ಭ್ರೂಣಹತ್ಯೆ ಕೇಸ್: ಮತ್ತೊಂದು ಗರ್ಭಪಾತ ಪ್ರಕರಣ ಬೆಳಕಿಗೆ!
ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿದಾಗಿಂದ ದರ್ಶನ್ಗೂ? ಪವಿತ್ರಾ ಗೌಡಗೂ? ಏನ್ ಸಂಬಂಧ ಅನ್ನೋ ಪ್ರಶ್ನೆ ಖಂಡಿತವಾಗಿಯೂ ಇತ್ತು. ಅದ್ಕೆ ಒಬ್ಬರು ಒಂದೊಂದ್ ರೀತಿಯಲ್ಲಿ ಹೇಳ್ತಿದ್ರು. ಬಟ್, ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವ್ರು ದರ್ಶನ್ ಆರೆಸ್ಟ್ ಆಗ್ತಾ ಇದಂತೆ ಅವರ ಪತ್ನಿ ಪವಿತ್ರಾ ಗೌಡ ಅನ್ನು ಅರೆಸ್ಟ್ ಮಾಡಲಾಗಿದೆ ಅನ್ನೋ ಸುಳಿವು ಕೊಟ್ಟಿದ್ರು. ಬಟ್, ಇಂತಾ ಸಂದರ್ಭದಲ್ಲಿ ಸಿಡಿದೆದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಮಿಷನರ್ಗೆ ಪತ್ರ ಬರೆದಿದ್ದರು. ದರ್ಶನ್ನ ಧರ್ಮಪತ್ನಿ ನಾನು. ದರ್ಶನ್ಗೆ ಪವಿತ್ರಾ ಗೌಡ ಪತ್ನಿ ಅಲ್ಲ ಅಂತಾ ಹೇಳಿದ್ರು. ಇದ್ರಿಂದ ದರ್ಶನ್ಗೆ ಪವಿತ್ರಾ ಫ್ರೆಂಡಾ? ಪ್ರಿಯತಮೆಯಾ? ಇಲ್ಲವೇ ಪತ್ನಿಯಾ? ಅನ್ನೋ ಚರ್ಚೆ ಸಾರ್ವಜನಿಕರಲ್ಲಿ, ದಾಸನ ಅಭಿಮಾನಿಗಳಲ್ಲಿ ಮತ್ತೆ ಶುರುವಾಗಿತ್ತು. ಬಟ್, ಪೊಲೀಸ್ರು ಸಲ್ಲಿಸಿರೋ ಚಾರ್ಜ್ಶೀಟ್ನಲ್ಲಿ ದರ್ಶನ್ ಶಾಕಿಂಗ್ ಸ್ಟೇಟ್ಮೆಂಟ್ ದಾಖಲಾಗಿದೆ. ಪವಿತ್ರಾ ಗೌಡಗೂ ತಮ್ಗೂ ಯಾವ್ ಎಂತಾ ಬಾಂಧವ್ಯ ಅನ್ನೋದನ್ನು ತೆರೆದಿಟ್ಟಿದ್ದಾರೆ.
ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆಗ್ತಾ ಇದ್ದಂತೆ ಪೊಲೀಸ್ರು ಒಂದೊಂದೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾ ಹೋಗಿದ್ದಾರೆ. ಪ್ರತಿಯೊಬ್ಬ ಆರೋಪಿಯಿಂದಲೂ ಪ್ರತ್ಯೇಕ ಹೇಳಿಕೆಯನ್ನು ಪಡೆದಿದ್ದಾರೆ. ಅವರಿಗೆ ಇರೋ ಅನುಮಾನದ ಆಧಾರದ ಮೇಲೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ. ಅದೇ ರೀತಿ ದರ್ಶನ್ಗೆ ಪೊಲೀಸ್ ತನಿಖಾಧಿಕಾರಿಗಳು ನಿಮ್ಗೂ ಪವಿತ್ರಾಗೂ? ಏನು ಸಂಬಂಧ? ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ದರ್ಶನ್ ಕೊಟ್ಟ ಉತ್ತರ ಏನು ಗೊತ್ತಾ?. ತಾನು ಮತ್ತು ಪವಿತ್ರಾ ಗೌಡ ಕೆಲವು ವರ್ಷಗಳಿಂದ ಲಿವಿಂಗ್ ಇನ್ ರಿಲೇಷನ್ ಶಿಪ್ನಲ್ಲಿದ್ದೇವೆ ಅಂದಿದ್ದಾರೆ. ಇಂತಾವೊಂದ್ ಸೇಟ್ಮೆಂಟ್ ಸ್ವತಃ ದರ್ಶನ್ ಕೊಟ್ಟಿದ್ದಾರೆ. ಇದ್ರಿಂದ ದರ್ಶನ್ಗೂ? ಪವಿತ್ರಾಗೌಡಗೂ? ಏನ್ ಬಂಧ ಅನ್ನೋದ್ ಚಾರ್ಜ್ಶೀಟ್ನಲ್ಲಿಯೇ ಬಟಾಬಯಲಾಗಿದೆ.