ಚಿತ್ರದುರ್ಗ:– ರಾಜ್ಯ ಸರ್ಕಾರ ಪಿಓಪಿ ಗಣಪತಿ ಮಾರಾಟವನ್ನು ನಿರ್ಬಂಧಿಸಿ ಆದೇಶಿಸಿದೆ. ಆದರೂ ಸಹ ಪಿಓಪಿ ಗಣಪತಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಹೀಗಾಗಿ, ಪರಂಪರಾಗತವಾಗಿ ಮಣ್ಣಿನ ಮೂರ್ತಿ ತಯಾರಿಸಿಕೊಂಡು ಬಂದಿರುವ ಕುಟುಂಬಗಳು ಸಂಕಷ್ಟಕ್ಕೀಡಾಗುವಂತಾಗಿದೆ.
Prahlad Joshi: ಜೈಲಿನ ದರ್ಶನ್ ಫೋಟೋ ಹೊರ ಬಿಟ್ಟದ್ದು ರಾಜ್ಯ ಸರ್ಕಾರ: ಜೋಶಿ!
ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಉತ್ಸವ ನಾಡಿನ ಜನರ ಗಮನ ಸೆಳೆದಿದೆ. ಆದ್ರೆ, ದುರ್ಗದಲ್ಲೇ ಪಿಓಪಿ ಗಣಪತಿಗಳ ಹಾವಳಿ ಹೆಚ್ಚಿದ್ದು, ಮಣ್ಣಿನ ಗಣಪತಿ ತಯಾರಕರಿಗೆ ಪೆಟ್ಟು ಬಿದ್ದಿದ್ದು ಅಲ್ಲದೆ ಪರಿಸರ ನಾಶದ ಭೀತಿ ಸೃಷ್ಠಿಸಿದೆ. ಹೀಗಾಗಿ, ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.