ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಒಂಬತ್ತು ದಿನದಲ್ಲಿ 735 ರೂ. ಖರ್ಚು ಮಾಡಿದ್ದಾರೆ. ಜೈಲಿನ ಕ್ಯಾಂಟೀನ್ನಲ್ಲಿ ಟೀ, ಕಾಫಿಗಾಗಿ ಖರ್ಚು ಮಾಡಿದ್ದಾರೆ. ಜೈಲಿನಲ್ಲಿ ಒತ್ತಡಕ್ಕೆ ಒಳಗಾಗಿರುವ ಆರೋಪಿ ದರ್ಶನ್ ಕಾಫಿ, ಟೀ ಮೊರೆ ಹೋಗಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲ್ನಲ್ಲಿರುವ ಆರೋಪಿ ದರ್ಶನ್ ಅವರ ಪ್ರೀಜ್ನರ್ಸ್ ಪ್ರೈವೇಟ್ ಅಕೌಂಟ್ನಲ್ಲಿದ್ದ ಹಣ ಖರ್ಚಾಗಿದೆ.
Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ 35,000 ರೂ. ಹಣ ದರ್ಶನ್ ಅವರ ಪಿಪಿಸಿ ಅಕೌಂಟ್ನಲ್ಲಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಬಂದ ಬಳಿಕ ಅದೇ ಹಣ ವರ್ಗಾವಣೆ ಆಗಿತ್ತು. ಇದೀಗ ಅದೇ ಹಣದಲ್ಲಿ ಕಾಫಿ, ಟೀ ಗಾಗಿ ಖರ್ಚು ಮಾಡಿದ್ದಾಗಿ ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದರ್ಶನ್ ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ರಾಜಾತಿಥ್ಯ ಆರೋಪದ ಕಾರಣ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.