ಹುಬ್ಬಳ್ಳಿ: ಸ್ಥಳೀಯ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿನ ಗುಣಮಟ್ಟದಲ್ಲಿ ನೀಡಬೇಕೆಂಬ ಉದ್ದೇಶದಿಂದ ಬ್ರೈಟ್ ಶಿಕ್ಷಣ ಪ್ರತಿಷ್ಠಾನ (ಬ್ರೈಟ್ ಎಜ್ಯುಕೇಶನ್ ಟ್ರಸ್ಟ್) ನೂತನವಾಗಿ ಬ್ರೈಟ್ ಬಿಜನೆಸ್ (ಬಿಬಿಎಸ್) ಕಾಲೇಜನ್ನು ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಹತ್ತಿರ ಸ್ಥಾಪಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಪ್ರಸಾದ ರೂಡಗಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಉದ್ಯಮ ಕ್ಷೇತ್ರ ತೀವ್ರತರವಾಗಿ ಬೆಳೆವಣಿಗೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನತೆಗೆ ಅನುಕೂಲವಾಗಿಸುವ ದೃಷ್ಟಿಯಿಂದ 2024-25 ಶೈಕ್ಷಣಿಕ ವರ್ಷದಿಂದ ಬ್ರೈಟ್ ಎಂಬಿಎ ಕಾಲೇಜು ಪ್ರಾರಂಭಿಸಲಾಗಿದೆ. ಈ ಸಂಸ್ಥೆ ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟಿರುವ ಹಾಗೂ ದೆಹಲಿಯ ಎಐಸಿಟಿಇ ಯಿಂದ ಮಾನ್ಯತೆ ಪಡೆದುಕೊಂಡಿದೆ ಎಂದರು.
ಆಧುನಿಕ ದಿನಮಾನದಲ್ಲಿ ಕಾರ್ಪೋರೆಟ್ ಜಗತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟ ನಿರ್ವಹಣಾ ವ್ಯಕ್ತಿ ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶ ಹೊಂದಿರುವ ವಿದ್ಯಾರ್ಥಿಗಳ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಎಲ್ಲ ತರಹದ ಮೂಲಭೂತ ಸೌಕರ್ಯಗಳು, ಉತ್ತಮ ಕಲಿಕಾ ವಾತಾವರಣ ಮತ್ತು ಅರ್ಹ ಬೋಧನಾ ಸಿಬ್ಬಂದಿ ಹೊಂದಿದ್ದು, ವಿದ್ಯಾರ್ಥಿಗಳ ಕಲಿಕಾ ಬೇಡಿಕೆಗೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ತರಬೇತಿ ನೀಡಲು ಟೊಂಕ ಕಟ್ಟಿ ನಿಂತಿದೆ ಎಂದರು.
Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ
ಸದ್ಯ ಬಿಬಿಎಸ್ ಕಾಲೇಜು ಬ್ರೈಟ್ ಎಂಟ್ರೆನ್ಸ್ & ಸ್ಕಾಲರ್ಶಿಪ್ ಟೆಸ್ಟ್, ಬ್ರೈಟ್ ಪ್ರವೇಶ ಮತ್ತು ಶಿಷ್ಯವೇತನ ಪರೀಕ್ಷೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಎಂಬಿಎ ಕಲಿಕೆಗಾಗಿ ವಿವಿಧ ಶಿಷ್ಯವೇತನ ನೀಡಲು ಮುಂದಾಗಿದೆ. ಸೆ.10 ಹುಬ್ಬಳ್ಳಿಯ ಬಿಬಿಎಸ್ ಕಾಲೇಜು, 12 ರಂದು ಕಾರವಾರದ ದಿವೇಕರ ಕಾಲೇಜು ಹಾಗೂ 17 ರಂದು ವಿಜಯಪುರದ ದರ್ಬಾರ್ ಡಿಗ್ರಿ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಸುಮಾರು 30 ಸಾವಿರ ಚದರ ಅಡಿಯಲ್ಲಿ ಕಾಲೇಜು ಆರಂಭಿಸಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ನುರಿತ ತರಬೇತಿ, ಫ್ರೀ ಪ್ಲೇಸಮೆಂಟ್ ತರಬೇತಿ, ಜೊತೆಗೆ ದೊಡ್ಡ ದೊಡ್ಡ ಕಂಪನಿಗಳ ಎಚ್ ಆರ್ ಅವರಿಂದ ಸೂಕ್ತ ಮಾರ್ಗದರ್ಶನ, ಪ್ರತಿ ಸೆಮಿಸ್ಟರ್ ಗೆ ಸರ್ಟಿಫಿಕೆಟ್ ತರಬೇತಿ, ಇಂಡಸ್ಟ್ರಿಯಲ್ ಭೇಟಿ, ಒಂದು ವಿದೇಶ ಭೇಟಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲಾಗುವುದು ಎಂದರು.
ಪಿಜಿಸಿಟಿ ವಿದ್ಯಾರ್ಥಿಗಳಿಗೆ 3.5 ಲಕ್ಷ ಜಾಗೂ ಮ್ಯಾನೇಜ್ಮೆಂಟ್ ಶುಲ್ಕ 4 ಲಕ್ಷ ನಿಗದಿ ಪಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಉಪಹಾರ, ಊಟ, ಸಮವಸ್ತ್ರ ನೀಡಲಾಗುವುದು ಎಂದರು. ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ನುರಿತ 6 ಜನ ಉಪನ್ಯಾಸಕರಿದ್ದಾರೆ ಎಂದರು. ಮಾಹಿತಿಗೆ ಮೊ: 9448150146 ಅಥವಾ ಜಾಲತಾಣ www.brightschool.in ಗೆ ಭೇಟಿ ನೀಡಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಬಿ.ಹಳ್ಯಾಳ, ಬಸವರಾಜ ಲಿಂಗಶೆಟ್ಟರ, ಅನಿಲ ಲಿಂಗಶೆಟ್ಟರ ಇದ್ದರು.