ಗದಗ: ನಗರದ ಭೂಮರೆಡ್ಡಿ ಸರ್ಕಲ್ನಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ವಾಹನ ಹರಿದು ಹೆಡ್ ಕಾನ್ಸ್ಟೇಬಲ್ ರಮೇಶ್ ಡಂಬಳ(42) ಎಂಬುವವರು ಸಾವನ್ನಪ್ಪಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಆಗಿದ್ದ ರಮೇಶ್, ಮನೆಯಲ್ಲಿ ನಾಳೆ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ಹೊಂಡಾ ಎಕ್ಟಿವಾ ವಾಹನದಲ್ಲಿ ಹೆಡ್ ಕಾನಸ್ಟೇಬಲ್ ಹಾಗೂ ಆತ ಸಾಕಿದ ನಾಯಿ ಕರೆದುಕೊಂಡು ಹೂವು-ಹಣ್ಣು ಸೇರಿ ಪೂಜೆ ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ಮನೆಗೆ ಹೊರಟ್ಟಿದ್ದರು.
Shivamogga Airport: ಮುಚ್ಚುತ್ತಾ ಶಿವಮೊಗ್ಗ ವಿಮಾನ ನಿಲ್ದಾಣ?: ಇನ್ನು ಒಂದು ತಿಂಗಳು ಮಾತ್ರ ಕಾರ್ಯಾಚರಣೆ !
ಈ ವೇಳೆ ಯಮನಂತೆ ಆಗಮಿಸಿದ ಕಾಂಕ್ರಿಟ್ ಮಿಕ್ಸಿಂಗ್ ವಾಹನ ಹರಿದು ಘಟನೆಯಲ್ಲಿ ಮಾಲೀಕ ಸಾವನ್ನಪ್ಪಿದರೆ, ಸಾಕಿದ ನಾಯಿ ಬಚಾವ್ ಆಗಿದೆ. ಇತ್ತ ಮಾಲೀಕನ ಸಾವಿನಿಂದ ನಾಯಿ ಕಂಗಾಲಾಗಿದ್ದು, ಮನೆಯವರ ದುಖಃ ಮುಗಿಲುಮುಟ್ಟಿದೆ. ಸ್ಥಳಕ್ಕೆ ಡಿವೈಎಸ್ಪಿ ಜೆ.ಹೆಚ್.ಇನಾಮದಾರ, ಸಿಪಿಐ ಶಿವಯೋಗಿ ಹಾಗೂ ಪಿಎಸ್ಐ ಶಕುಂತಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.