ಹುಬ್ಬಳ್ಳಿ: ಕೋವೀಡ್ ಹಗರಣ ಕುರಿತು ಏಕಾಏಕಿ ಸಿಎಸ್ ನೇತೃತ್ವದಲ್ಲಿ ಸಮಿತಿಗೆ ತಯಾರು ವಿಚಾರದಲ್ಲಿ ಮುಖ್ಯಮಂತ್ರಿಗಳು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಡಾ ,ವಾಲ್ಮೀಕಿ ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಸರ್ಕಾರ ಈ ಹಗರಣಗಳ ತನಿಖೆ ದಾರಿ ತಪ್ಪಿಸಲು ಈಗ ಈ ದಾರಿ ಹಿಡಿದಿದ್ದಾರೆ.ಆದರೆ ಬಹಳ ಸ್ಪಷ್ಟವಾಗಿ ಭಾರತೀಯ ಜನತಾ ಪಕ್ಷದ ನಿಲುವು ಇದ್ದು ಯಾವುದೇ ತನಿಖೆಗೂ ಭಾರತೀಯ ಜನತಾ ಪಕ್ಷ ಸಿದ್ಧ ಮುಡಾ ಹಗರಣದಲ್ಲಿ ತಮ್ಮ ಮೇಲೆ ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗಿತ್ತು.
ಆದರೆ ಬಂಡತನದಿಂದ ನಾನೇ ಎನ್ನುವುದು ಬಿಡಿಈಗಾಗಲೇ ಯಾವುದೇ ತನಿಖೆ ಆಗಲಿ ಆ ವರದಿ ಬರಲಿಏನು ವರದಿ ಬರುತ್ತದೆ ಬರಲಿ ಖಂಡಿತವಾಗಿಯೂ ಮುಡಾ ಹಗರಣದಲ್ಲಿ ಯಾವು ಭಾಗಿಯಾಗಿದ್ದೀರಿ ಅಂತಾ ಕಾಡತಾ ಇದೆ. ಆದ್ದರಿಂದ ಅದನ್ನ ಮರೆ ಮಾಚಲು ಕೋವೀಡ್ ಹಗರಣ ಅಂತಾ ಹೇಳಿ ತನಿಖೆಗೆ ಮುಂದಾಗಿದ್ದಿರೆ. ಇದು ಸರಿಯಲ್ಲ ಧ್ವೇಷದ ರಾಜಕಾರಣ ಬೀಡಿ ಎಂದ ಅವರು
ಭಾರತೀಯ ಜನತಾ ಪಕ್ಷದ ಮೇಲೆ ವಿನಾಕಾರಣ ಗೊಬೆ ಕುಳ್ಳಿಸುತ್ತಾ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದದಲ್ಲಿ ಅವಧಿಗೆ ಮುನ್ನ ಸರಕಾರ ಬಿಳ್ಳಬಹುದು ಎಂಬ ಪರೋಕ್ಷವಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮನೆವೊಂದು ಮೂರು ಬಾಗಿಲು ಆಗಿದ್ದು ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲಇನ್ನೂ ಮುಖ್ಯಮಂತ್ರಿ ಗಾಧಿ ಖಾಲಿ ಆಗಿಲ್ಲ
ಆದರೆ ಯಾರು ಯಾರು ಟವಲ್ ಹಾಕುವ ಕೆಲಸ ಮಾಡತಾ ಇದ್ದಾರೆ. ಇದು ಸಮಸ್ಯೆಗಳ ಸುರಿಮಾಲೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನ ಸರಕಾರ ಎದುಸುತ್ತಿದೆ ಎಂದರು. ಮಹದಾಯಿ ಯೋಜನೆ ಜಾರಿಯಲ್ಲಿ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವ ವಿಚಾರ ಮಹದಾಯಿ ಯೋಜನೆ ಜಾರಿಯಲ್ಲಿ ಯಾರ ಪಾತ್ರ ಎಷ್ಟು ಇದೆ ಅಂತಾ ಗೊತ್ತು ಇದೆಮಹದಾಯಿ ಯೋಜನೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದು ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿ ಎ ಸರಕಾರ ಕರ್ನಾಟಕದಲ್ಲಿ ಪ್ರಲ್ಹಾದ್ ಜೋಶಿ ಅವರು ಬಹಳ ಪ್ರಯತ್ನ ಮಾಡಿದ್ದಾರೆ.
ಒಂದು ತಾರ್ಕಿಕ ಅಂತ್ಯ ಹಾಡಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆಇವತ್ತು ಅರಣ್ಯ ಕ್ಲೀರನ್ಸ್ ಆಗಬೇಕು ಅಷ್ಟೇ ಈ ಹಿಂದೇ ಇದೇ ಕಾಂಗ್ರೆಸ್ ನವರು ಏನು ಹೇಳಿದರುಶ್ರೀಮತಿ ಸೋನಿಯಾ ಗಾಂಧಿ ಅವರು ಒಂದು ಹನಿ ನೀರನ್ನ ಬಿಡಲ್ಲ ಎಂದಿದ್ದರು. ರಾಜ್ಯ ಸರ್ಕಾರ ಯಾವುದೇ ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದರು.