ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಗಲ್ಲಿ ಗಲ್ಲಿಯಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಲು ಎಲ್ಲರು ಸಜ್ಜಾಗಿದ್ದರೆ, ಅತ್ತ ಗೌರಿ ಹಬ್ಬ ಆಚರಿಸಲು ಹೆಂಗಳೆಯರು ಸಿದ್ಧರಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಹಬ್ಬದ ತಯಾರಿ ಜೋರಾಗಿದ್ದು, ಕೆಆರ್ ಮಾರ್ಕೆಟ್ನಲ್ಲಿ ಹಬ್ಬದ ಸಾಮಾಗ್ರಿಗಳ ಖರೀದಿ ಜೋರಾಗಿ ನಡೆದಿದೆ. ಇತ್ತ ಗೌರಿ ಗಣೇಶನ ಅಂದ ಚಂದದ ಮೂರ್ತಿಗಳಿಗೂ ಬೇಡಿಕೆ ಹೆಚ್ಚಾಗಿದ್ದು, ಹಬ್ಬದ ಖುಷಿಗೆ ಕೊಂಚ ಬೆಲೆಯೇರಿಕೆ ಬಿಸಿಯೂ ತಟ್ಟಿದೆ.
ಕೆಆರ್ ಮಾರ್ಕೆಟ್ನಲ್ಲಿ ಖರೀದಿ ಜೋರಾಗಿತ್ತು. ಹೂವು, ಹಣ್ಣು, ಗರಿಕೆ, ಎಕ್ಕದ ಹಾರದ ಜೊತೆಗೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ವ್ಯಸ್ತರಾಗಿದ್ದರು. ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಬಿಸಿ ಮುಟ್ಟಿಸಿತ್ತು.
ಕನಕಾಂಬರ ಕೆಜಿಗೆ – 3000 ರೂ. ಮಲ್ಲಿಗೆ – ಕೆಜಿಗೆ 600 ರೂ. ಗುಲಾಬಿ- ಕೆಜಿಗೆ 250 ರೂ. ಸೇವಂತಿಗೆ – ಕೆಜಿಗೆ 180 ರೂ. ಸುಗಂಧರಾಜ-ಕೆಜಿಗೆ 240 ರೂ.
ಹಣ್ಣುಗಳ ದರ
- ಸೇಬು- ಕೆಜಿಗೆ 120 ರಿಂದ 200ರೂ.
- ದಾಳಿಂಬೆ- ಕೆಜಿಗೆ 160 ರೂ.
- ಏಲಕ್ಕಿ ಬಾಳೆ – ಕೆಜಿಗೆ 120 ರೂ.
- ಸೀತಾಫಲ- ಕೆಜಿಗೆ 100 ರೂ.
- ಸಪೋಟ- ಕೆಜಿಗೆ 100 ರೂ.
- ದ್ರಾಕ್ಷಿ- ಕೆಜಿಗೆ 120- 200 ರೂ.
- ಅನಾನಸ್- ಎರಡಕ್ಕೆ 100-120 ರೂ.
ಹಬ್ಬದ ಸಾಮಾಗ್ರಿಗಳ ದರ
- ಬಾಳೆಕಂದು- ಜೋಡಿಗೆ 60 ರೂ.
- ಮಾವಿನ ತೋರಣ- 20 ರೂ.
- ಗರಿಕೆ-ಕಟ್ಟಿಗೆ 30 ರೂ.
- ಬಿಲ್ವಪತ್ರೆ- 20ರೂ.
- ಎಕ್ಕದಹಾರ- 50 ರಿಂದ 60 ರೂ.