ಬೆಂಗಳೂರು:- ಬಿಟ್ಟು ಬಿಡದೇ ಕಾಡುತ್ತಿರುವ ಚಿರತೆ ಕಾಟದಿಂದ ಸ್ಥಳೀಯರು ಆತಂತಕ್ಕೀಡಾಗಿರುವ ಘಟನೆ ನಗರದ ಕ್ಯಾಲಸನಹಳ್ಳಿಯಲ್ಲಿ ನಡೆದಿದೆ.
ಕರ್ನಾಟಕದ 31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ; ಶಿಕ್ಷಣ ಇಲಾಖೆಯಿಂದ ಪಟ್ಟಿ ರಿಲೀಸ್!
ಚಿರತೆಯ ಓಡಾಟವು ಕ್ಯಾಲಸನಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ಸಿಸಿಟಿವಿಯಲ್ಲಿ ಚಿರತೆಯ ಓಡಾಟ ದೃಶ್ಯ ಸೆರೆಯಾಗಿದೆ. ಜೊತೆಗೆ ಪ್ರಾಣಿಯನ್ನು ಹಿಡಿಯುವ ದೃಶ್ಯ ಕೂಡಾ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬಳಿ ಚಿರತೆ ಹಿಡಿಯಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಗತ್ಯ ಬಿದ್ದಲ್ಲಿ ಬೋನು ಇಡುವಂತೆ ರಿಕ್ವೆಸ್ಟ್ ಮಾಡಿದ್ದಾರೆ. ಇನ್ನೂ 2 ದಿನಗಳ ಹಿಂದಷ್ಟೇ ಚಿರತೆ ಕಾಣಿಸಿ ಕೊಂಡಿತ್ತು. ಮತ್ತೆ ಈಗ ಅದೇ ಕ್ಯಾಲಸನಹಳ್ಳಿ ಭಾಗದಲ್ಲಿ ಓಡಾಟ ಜೋರಾಗಿದೆ. ಇದ್ರಿಂದ ಜನರ ಎದೆ ಬಡಿತ ಮತ್ತಷ್ಟು ಹೆಚ್ಚಾಗಿದೆ.