2009ರಲ್ಲಿ ನನಗೆ ಬೆದರಿಕೆ ಹಾಕಿ ಐಪಿಎಲ್ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದರು. ಈ ಟ್ರಾನ್ಸ್ಫರ್ಗೆ ನಾನು ಒಪ್ಪಿರಲಿರಲಿಲ್ಲ. ಟ್ರಾನ್ಸ್ಫರ್ ಪೇಪರ್ಗಳಿಗೆ ಸಹಿ ಹಾಕಲು ಆಗಲ್ಲ ಎಂದಿದ್ದೆ. ನೀವು ಈ ಟ್ರೇಡ್ ಪತ್ರಗಳಿಗೆ ಸಹಿ ಮಾಡದಿದ್ರೆ, ತಂಡದಲ್ಲಿ ಆಡಲು ಅವಕಾಶ ನೀಡಲ್ಲ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಉಸ್ತುವಾರಿ ಬೆದರಿಕೆ ಹಾಕಿದ್ದರು ಎಂದು ಉತ್ತಪ್ಪ ಹೇಳಿದ್ದಾರೆ.
ಇನ್ನು, ಈ ಬೆಳವಣಿಗೆ ನಂತರ ನಾನು ಖಿನ್ನತೆಗೆ ಒಳಗಾದೆ. ನಾನು 2009ರಲ್ಲಿ ಆರ್ಸಿಬಿ ಪರ ಉತ್ತಮವಾಗಿ ಆಡಿದೆ. ಆದರೆ 2011 ರಲ್ಲಿ ನಾನು ನನ್ನ ಮೇಲಿನ ಸಂಪೂರ್ಣ ಕಂಟ್ರೋಲ್ ಕಳೆದುಕೊಂಡಿದ್ದೆ. ನನ್ನ ತಾಯಿ ನೆರವಿಗೆ ನಿಂತರು. ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು ಎಂದರು.
ಉತ್ತಪ್ಪ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್. ಇವರು ಕಳೆದ ಐಪಿಎಲ್ ಸೀಸನ್ಗೆ ಮುನ್ನವೇ ಎಲ್ಲಾ ಮಾದರಿ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ರು. ಕನ್ನಡಿಗ ಉತ್ತಪ್ಪ ಐಪಿಎಲ್ನಲ್ಲಿ ಹಲವು ತಂಡಗಳಿಗೆ ಆಡಿದ್ದಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೆಕೆಆರ್, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 205 ಪಂದ್ಯಗಳಲ್ಲಿ 4,952 ರನ್ ಕಲೆ ಹಾಕಿದ್ದಾರೆ.
ನಾನು ಆ ಘಟನೆಯಿಂದ ಖಿನ್ನತೆಗೆ ಒಳಗಾಗಿದ್ದೆ ಎಂದು RCB ಸ್ಟಾರ್ ಪ್ಲೇಯರ್ ಒಬ್ಬರು ಶಾಕಿಂಗ್ ಸತ್ಯ ಬಿಚ್ಚಿಟ್ಟಿದ್ದಾರೆ.
ಆರ್ಸಿಬಿ ತಂಡದ ಮಾಜಿ ಕ್ರಿಕೆಟರ್ ಕನ್ನಡಿಗ ರಾಬಿನ್ ಉತ್ತಪ್ಪ ಶಾಕಿಂಗ್ ವಿಚಾರವೊಂದು ಬಿಚ್ಚಿಟ್ಟಿದ್ದಾರೆ.