ಬೆಂಗಳೂರು :– ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ ಮೋಹನ್ ನಮ್ಮ ಮೆಟ್ರೋದಲ್ಲಿ ಇಂದು ಪ್ರಯಾಣ ಮಾಡಿ ಪ್ರಯಾಣಿಕರ ಸಮಸ್ಯೆ ಆಲಿಸಲಿದ್ದಾರೆ. ಪರ್ಪಲ್ ಲೈನ್ನಲ್ಲಿ ಬರುವ ವೈಟ್ ಫೀಲ್ಡ್ ಟು ಚಲ್ಲಘಟ್ಟ ಮಾರ್ಗದಲ್ಲಿ ಸಂಸದರು ಪ್ರಯಾಣಿಸಿದ್ದಾರೆ.
ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ!
ಪ್ರತಿದಿನ ಏಳರಿಂದ ಏಳುವರೆ ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಇಬ್ಬರೂ ಸಂಸದರು ಇಂದು ಪ್ರಯಾಣಿಕರ ಸಮಸ್ಯೆಗಳು ಆಲಿಸಿದ್ದಾರೆ.
ಕಾಲಿಡಲು ಜಾಗವಿಲ್ಲದಷ್ಟು ಮೆಟ್ರೋ ರೈಲು ರಷ್ ಆಗುತ್ತದೆ. ಪಿಕ್ ಅವರ್ನಲ್ಲಿ ರೈಲಿನ ಸಂಖ್ಯೆ ಹೆಚ್ಚಳ ಮಾಡಬೇಕು ಎಂದು ಪ್ರಯಾಣಿಕರು ಇಬ್ಬರೂ ಸಂಸದರಿಗೆ ಮನವಿ ಮಾಡಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣದ ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಜನರ ಜೊತೆ ಮಾತನಾಡಿ ಅಧಿಕಾರಿಗಳಿಗೆ ಅವುಗಳನ್ನ ತಿಳಿಸಿದ್ದೇವೆ. ಪೀಕ್ ಅವರ್ನಲ್ಲಿ ಜನರಿಗೆ ಸಮಸ್ಯೆಯಾಗುತ್ತಿದೆ. ಪಿಸಿ ಮೋಹನ್ ರವರು ಶಾರ್ಟ್ ಲೂಪ್ ಟ್ರೈನ್ಗಳ ಬಗ್ಗೆ ಹೆಳಿದ್ದಾರೆ. ಪಟ್ಟಂದೂರು ವರೆಗೂ ವಿಸ್ತರಿಸಲು ಸಾಧ್ಯವಿದೆಯಾ ಎಂದು ಮನವಿ ಮಾಡಿದ್ದೇವೆ ಎಂದಿದ್ದಾರೆ.
ನಮ್ಮ ಬಳಿ ಇರುವ ಟ್ರೈನ್ ಸೆಟ್ಗಳಲ್ಲಿ 95 % ರಷ್ಟು ಕಾರ್ಯ ನಿರ್ವಹಿಸುತ್ತಿವೆ. ಜೂನ್ 25ರ ಒಳಗೆ ಸೆಟ್ಸ್ ಕಾರ್ಯರೂಪಕ್ಕೆ ತರಲು ಹೇಳಿದ್ದಾರೆ. ಮುಂದಿನ ವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಬಿಎಂಆರ್ಸಿಎಲ್ ಅಧಿಕಾರಿಗಳು ದೆಹಲಿಗೆ ಬರುತ್ತಾರೆ. ಅವರ ಏನೆಲ್ಲಾ ಮನವಿಯನ್ನ ಕಾರ್ಯರೂಪಕ್ಕೆ ತರಬೇಕು ಅದಕ್ಕೆ ನಾವು ಮಾತನಾಡುತೇವೆ. ಮೆಜೆಸ್ಟಿಕ್ನಲ್ಲಿ ಸೈನೇಜ್ ಬೋರ್ಡ್ ಬಗ್ಗೆ ಹೇಳಿದ್ದಾರೆ, ಅಧಿಕಾರಿಗಳಿಗೆ ಹೇಳಿದ್ದೇವೆ. ಸೈನೇಜ್ಗಳನ್ನ ರಿವಿವ್ಯೂ ಮಾಡಲು ಹೇಳಿದ್ದಾರೆ ಎಂದರು.
ಸಂಸದ ಪಿಸಿ ಮೋಹನ್ ಮಾತನಾಡಿ, ಇಂದು ನಾನು ಮತ್ತು ತೇಜಸ್ವಿ ಸೂರ್ಯರವರು ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದೇವೆ. ಕೆಆರ್ಪುರಂನಿಂದ ಬರುವಾಗ ಜನರ ಸಮಸ್ಯೆ ಆಲಿಸಿದ್ದೇವೆ. ಪೀಕ್ ಅವರ್ನಲ್ಲಿ ಟ್ರೈನ್ ಫ್ರೀಕೆನ್ಸಿ ಹೆಚ್ಚಾಗಬೇಕು ಅಂತ ಹೇಳಿದ್ದಾರೆ. ಗರುಡಾಚಾರ್ ಪಾಳ್ಯದಲ್ಲಿ ನಿಲ್ಲುತ್ತಿದ್ದ ರೈಲು ಪಟ್ಟಂದೂರಿಗೂ ಬೇಕು ಅಂತ ಹೇಳಿದ್ದಾರೆ. ಎಂಟುವರೆ ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಪೀಕ್ ಅವರ್ಸ್ಗೆ 21 ಸೆಟ್ ಟ್ರೈನ್ ಆರ್ಡರ್ ಮಾಡಿದ್ದಾರೆ. ಕೆಲ ಕಾರಣಗಳಿಂದ ತಡವಾಗಿದೆ. ಬೇರೆ ಬೇರೆ ವಿಚಾರಗಳಿಗೂ ಕೂಡಾ ಒತ್ತು ಕೊಟ್ಟಿದ್ದೇವೆ ಎಂದಿದ್ದಾರೆ.