ಬೆಂಗಳೂರು:- ದರ್ಶನ್ ರಿಲೀಸ್ ಬಗ್ಗೆ ಯೋಚಿಸುತ್ತಿದ್ದ ಅಭಿಮಾನಿಗಳಿಗೆ ಅರ್ಧ ಗುಡ್ ನ್ಯೂಸ್ ಮತ್ತರ್ಧ ಬ್ಯಾಡ್ನ್ಯೂಸ್. ಅದೇನು ಅಂದ್ರೆ , ಕೊನೆಗೂ ಪೊಲೀಸರು ಚಾರ್ಜ್ಶೀಟ್ ಸಲ್ಲಿಸೋದಕ್ಕೆ ಸಜ್ಜಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸೋದಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ, ಚಾರ್ಜ್ಶೀಟ್ ಅನ್ನೋ ಸುಂಟರಗಾಳಿ ಎಬ್ಬಿಸೋ ಎಫೆಕ್ಟ್ ದರ್ಶನ್ ಪಾಲಿಗೆ ವರವೂ ಆಗಬಹುದು. ಶಾಪವೂ ಆಗಬಹುದು. ಆದರೆ, ದರ್ಶನ್ಗೆ ಕೊನೆಯ ಪಕ್ಷ ಬೇಲ್ ಸಿಗುತ್ತೋ? ಇಲ್ಲವೋ? 4000 ಪುಟಗಳ ಚಾರ್ಜ್ಶೀಟ್ ಅನ್ನೋ ಬೃಹತ್ ಪುಸ್ತಕ ಇದಕ್ಕೆ ಉತ್ತರ ನೀಡಲಿದೆ.
ಬರೋಬ್ಬರಿ 4000 ಪುಟಗಳ ಚಾರ್ಜ್ಶೀಟ್ ಸಿದ್ಧಗೊಂಡಿದೆ. 24ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದೆ ತನಿಖಾ ತಂಡ. ಇದೇ ಬೃಹತ್ ಚಾರ್ಜ್ಶೀಟ್ ಪುಸ್ತಕದಲ್ಲೇ ಎಂಟು ರಹಸ್ಯಗಳು ಅಡಗಿವೆ. ಆ ಎಂಟೂ ರಹಸ್ಯಗಳನ್ನು ದರ್ಶನ್ ಪರ ವಕೀಲರು ಭೇದಿಸಿದರೇ ಜೈಲೋ? ಬೇಲೋ? ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಅದೂ ಸಹ ಕೋರ್ಟ್ ಕೊಡಲಿದೆ. ಭಯಾನಕ ಸಂಗತಿ ಏನೆಂದರೇ, 4000 ಪುಟಗಳ ದೋಷಾರೋಪಣ ಪಟ್ಟಿಯಲ್ಲಿ ಡಿ ಗ್ಯಾಂಗ್ ಪ್ರದರ್ಶಿಸಿರೋ ಕ್ರೂರತ್ವದ ರಕ್ತಸಿಕ್ತ ಅಧ್ಯಾಯ ಎದ್ದು ಕಾಣುತ್ತಿದೆ. ಇಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕಾಯ್ದೆಗಳನ್ನೂ ಉಲ್ಲೇಖಿಸಿ ಪ್ರತೀ ಪುಟದಲ್ಲೂ ಸಾಧ್ಯವಾದಷ್ಟು ಕೇಸ್ಗಳನ್ನು ಜಡಿದಿರುವದ ಸಾಧ್ಯತೆ ಇದೆ. ಹಾಗಾಗಿಯೇ ಜಾರ್ಜ್ಶೀಟ್ ಅನ್ನೋ ಸುಂಟರಗಾಳಿ ದರ್ಶನ್ ಪಾಲಿಗೆ ಬಹುದೊಡ್ಡ ಬದಲಾವಣೆಯ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಜಾರ್ಜ್ಶೀಟ್ನಲ್ಲಿ ಮೊದಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಥಮ ಪ್ರಾಥಮಿಕ ವರದಿಯ ಪ್ರತಿ ದಾಖಲಾಗಿರುತ್ತೆ. ಮೊದಲಿಗೆ ಜೂನ್ 9ರಂದು ಸುಮನಹಳ್ಳಿ ಬಳಿಯ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ಕೇವಲ್ ರಾಮ್ ದೋರ್ಜೀ ಕೊಟ್ಟ ದೂರಿನ ಮೇಲೆ ಪೊಲೀಸರು ದಾಖಲಿಸಿದ ಎಫ್ಐಆರ್ ವರದಿಯ ಸಾರಾಂಶದ ಮಾಹಿತಿ ಅಡಗಿರುತ್ತದೆ. ಬೆಳಗ್ಗೆ 8 ಗಂಟೆಗೆ ಅಪಾರ್ಟ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ಸೆಕ್ಯೂರಿಟಿಗೆ ಕಂಡಿದ್ದ ಅಪರಿಚಿತ ಮೃತ ದೇಹದ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಈ ಸಂದರ್ಭ ಮೃತ ದೇಹದ ಮೇಲಿದ್ದ ಚಹರೆಗಳು ಬಿಚ್ಚಿಟ್ಟ ಸತ್ಯಗಳ ಆಧಾರದಲ್ಲೇ ಪೊಲೀಸರು ಅಸಲಿ ಗೇಮ್ ಆರಂಭಿಸಿದ್ದು. ಈ ಎಫ್ಐಆರ್ನಲ್ಲಿ ಪೊಲೀಸರು ಯಾಮಾರಿದರೆ ಇಲ್ಲಿಂದ್ಲೇ ದರ್ಶನ್ ಪರ ವಕೀಲರು ಪಾಯಿಂಟ್ ಟು ಪಾಯಿಂಟ್ ಲೆಕ್ಕ ಹಾಕಬಹುದು. ಈ ಕ್ಷಣಕ್ಕೂ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಿಕ್ತಿರೋ ದಾಖಲೆ ಇದೇ ಎಫ್ಐಆರ್.
ರೇಣುಕಾಸ್ವಾಮಿ ಕೊಲೆ ಕೇಸ್ನ ಜಾರ್ಜ್ಶೀಟ್ ಸುಂಟರಗಾಳಿಯ ಎರಡನೇ ಸೀಕ್ರೆಟ್ 17 ಮಂದಿ ಬಂಧಿತರ ಸಂಪೂರ್ಣ ಜಾತಕ. ಈ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಅಷ್ಟೂ ಆರೋಪಿಗಳ ಹೆಸರು, ವಿಳಾಸ, ಅಪರಾಧ ಹಿನ್ನೆಲೆ, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅವರ ಪಾತ್ರ ಏನು ಅನ್ನೋ ಕಂಪ್ಲೀಟ್ ಮಾಹಿತಿಯನ್ನೊಳಗೊಂಡ ಬೃಹತ್ ಮಾಹಿತಿಯ ವರದಿಯೂ ಸಹ ಜಾರ್ಜ್ಶೀಟ್ನಲ್ಲಿ ದಾಖಲಾಗಿದೆ.
ಕೊಲೆ ಕೇಸ್ ಸಂಬಂಧ ಪೊಲೀಸರು ಚಾರ್ಜ್ಶೀಟ್ನಲ್ಲಿ 200ಕ್ಕೂ ಅಧಿಕ ಸಾಕ್ಷಿಗಳ ಪಟ್ಟಿಯನ್ನೇ ನೀಡಲಿದ್ದಾರೆ. ಪ್ರಕರಣ ಸಂಬಂಧ ಭೌತಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷಿ ಸಂಗ್ರಹ ಆಗಿದೆ. ಅಲ್ಲದೆ, ಪ್ರತ್ಯಕ್ಷ, ಪರೋಕ್ಷ ಸಾಕ್ಷಿ ಹೊರತುಪಡಿಸಿ 200 ಗಡಿದಾಟಿದೆ. ಪ್ರಕರಣ ಸಂಬಂಧ ದಿನದಿಂದ ದಿನಕ್ಕೆ ಸಾಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದಲೇ ಚಾರ್ಜ್ಶೀಟ್ ಸಂಖ್ಯೆ 4000 ಗಡಿ ಮುಟ್ಟಿದೆ. ಇವುಗಳ ಜೊತೆಗೆ ದರ್ಶನ್ ಗ್ಯಾಂಗ್ಗೆ ಬಹುದೊಡ್ಡ ಭಯವೂ ಶುರುವಾಗಿದೆ. ಈ ಕೇಸ್ ಸಂಬಂಧ 30ಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್ಗಳನ್ನ ಸಂಗ್ರಹಿಸಿದ್ದಾರೆ. 400ಕ್ಕೂ ಅಧಿಕ ಸಿಡಿಆರ್ ಅನಾಲಿಸಿಸ್ ಆಗಿದೆ. 13 ಮೊಬೈಲ್ ಡೇಟಾ ರಿಟ್ರಿವಲ್ ಆಗಿದೆ. 190 ಕ್ಕೂ ಹೆಚ್ಚು ಟೆಕ್ನಿಕಲ್ ಡಿಜಿಟಲ್ ಸೇರಿ ಸೆಕೆಂಡರಿ ಎವಿಡೆನ್ಸ್ ರೇಣುಕಾಸ್ವಾಮಿ ಕೇಸ್ ನಲ್ಲಿ ಪತ್ತೆ ಮಾಡಲಾಗಿದೆ
ತನಿಖಾ ಕಾಲದಲ್ಲಿ ಸಂಗ್ರಹಿಸಿದ ಸಾಕ್ಷಿಗಳ ಲಿಸ್ಟ್, ಬಂಧಿತ ಆರೋಪಿಗಳು ಕೊಲೆ ಪ್ರಕರಣದಲ್ಲಿ ನಿರ್ವಹಿಸಿರೋ ಪಾತ್ರ, ಜೊತೆಗೆ ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯ ಪ್ರತಿಗಳು ಜಾರ್ಜ್ಶೀಟ್ನಲ್ಲಿ ಇರಲಿವೆ. ಇದಲ್ಲದೇ, ಪ್ರತ್ಯಕ್ಷದರ್ಶಿಗಳ ಸಾಕ್ಷಿ ಹೇಳಿಕೆ ಬಹುಮುಖ್ಯ ಆಗಲಿದೆ. 20ಕ್ಕೂ ಅಧಿಕ ಮಂದಿಯಿಂದ ನ್ಯಾಯಾಧೀಶರ ಮುಂದೆ ದಾಖಲಿಸುವಂತಹ 164ರ ಅಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 50ಕ್ಕೂ ಅಧಿಕ ಮಂದಿಯಿಂದ 161ರ ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ 70ಕ್ಕೂ ಅಧಿಕ ತಪ್ಪೊಪ್ಪಿಗೆ ಹೇಳಿಕೆಗಳೂ ಸಹ ಇದೀಗ ದರ್ಶನ್ ಪಾಲಿಗೆ ಸುಂಟರಗಾಳಿಯನ್ನೇ ಎಬ್ಬಿಸಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನ ಜಾರ್ಜ್ಶೀಟ್ ಸುಂಟರಗಾಳಿಯ ಐದನೇ ಸೀಕ್ರೆಟ್ ತುಂಬಾನೇ ಮಹತ್ವದಾಗಿದೆ. ದರ್ಶನ್ ಭವಿಷ್ಯ ನಿರ್ಧರಿಸೋ ಬಹುಮುಖ್ಯ ಅಂಶವೂ ಇದೇ ಆಗಿದೆ ಅಂದ್ರೂ ತಪ್ಪಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಪ್ರತೀ ಮೂಮೆಂಟ್ ಕೂಡ ಮಹಜರ್ ಆಗಿದೆ. ರೇಣುಕಾಸ್ವಾಮಿ ಹತ್ಯೆ ಸಂಬಂಧ ಒಟ್ಟಾರೆ 52 ಕಡೆಗಳಲ್ಲಿ ಸ್ಥಳ ಮಹಜರ್ ಮಾಡಲಾಗಿದೆ.
ರೇಣುಕಾಸ್ವಾಮಿ ಕಿಡ್ನ್ಯಾಪ್ ಆದ ಚಿತ್ರದುರ್ಗದಿಂದ ಹಿಡಿದು ಆಟೋದಿಂದ ಇಳಿದು ಕಾರು ಹತ್ತುವ ಸ್ಥಳ, ಆರೋಪಿಗಳು ಮಾರ್ಗಮಧ್ಯೆ ಬಿಡದಿ ಬಳಿ ಕಾರು ನಿಲ್ಲಿಸಿ ಊಟ ಮಾಡಿದ್ದ ಸ್ಥಳ, ಪಟ್ಟಣಗೆರೆ ಶೆಡ್, ಮೃತದೇಹ ಬಿಸಾಡಿದ್ದ ಸುಮ್ಮನಹಳ್ಳಿ …