ಬೆಂಗಳೂರು-ಹಳ್ಳಿಯಯಲ್ಲಿ ಒಂದು ಬಾರ್ ತೆಗೆದ್ರೆ ಆ ಹಳ್ಳಿ ಕಥೆ ಮಗೀತು ಅಂತನೇ ಅರ್ಥ. ಅದ್ರಲ್ಲೂ ಬರೀ ದಲಿತರೇ ಇರೋ ಗ್ರಾಮದಲ್ಲಿ ಬಾರ್ ತೆರೆದ್ರೆ ಆ ಜನರ ಬದುಕು ಬರ್ಬಾದ್ ಆಗೋದ್ರಲ್ಲಿ ಡೌಟೇ ಇಲ್ಲ. ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಚೆತ್ತೇಕೆರೆ ಪಾಳ್ಯ( ಸಿ ಕೆ ಪಾಳ್ಯ) ಗ್ರಾಮಕ್ಕೆ ಈ ಅಂತಹದ್ದೇ ಸ್ಥಿತಿ ಬಂದಿದೆ.ಪರಿಶಿಷ್ಟ ಜಾತಿಯ ದಲಿತ ಸಮುದಾಯದವೃಎ ಹೆಚ್ಚಿಗೆ ಇರೋ ಈ ಹಳ್ಳಿಯಲ್ಲಿ ಕೆ ಪ್ರಭಾವಿ ವ್ಯೆಕ್ತಿಗಳು ಬಾರ್ ತೆರೆಯಲು ಮುಂದಾಗಿದ್ದಾರೆ.
ಕೃಷಿ ಭೂಮಿಯಲ್ಲಿ ಅಕ್ರಮವಾಗಿ ತರಾತುರಿಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಬಾರ್ ಅಂಗಡಿ ತೆರೆಯಲುಪ್ರಯತ್ನಿಸುತ್ತಿದ್ದಾರೆ… ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇಂದು ಶಾಂತಿ ನಗರದಲ್ಲಿರುವ ಅಬಕಾರಿ ಕಮೀಷನರ್ ಹಾಗು ಬೆಂಗಳೂರುನಗರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನೂರಾರು ಸಂಖ್ಯೆಯ ಗ್ರಾಮಸ್ಥರು ನಮ್ಮೂರಿಗೆ ಬಾರ್ ತೆರೆಯಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ರು.
ಹಾಗೊಂದು ವೇಳೆ ನಮ್ಮೂರಿನಲ್ಲಿ ಮಧ್ಯಪಾನದ ಅಂಗಡಿ ತೆರೆಯಲು ಅನುವು ಮಾಡಿಕೊಟ್ಟರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಯಾನಂದ್ ಗ್ರಾಮಸ್ಥರ ಅಭಿಪ್ರಾಯದಂತೆ ಕ್ರಮತೆಗೆದುಕೊಳ್ಳೋದಾಗಿ ಭರವಸೆ ನೀಡಿದ್ದಾರೆ
ಇನ್ನು ಅಬಕಾರಿ ಉಪ ಆಯುಕ್ತರು ಜನರ ಮನವಿಗೆ ಸ್ಪಂಧಿಸಿ ನಾವು ಬಾರ್ ತೆರೆಯಲು ಯಾವುದೇ ರೀತಿಯ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.