ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿ ಕಡೆಗೆ ನೆಲೆಸಿದೆ. ದೈತ್ಯ ಆಸ್ಟ್ರೇಲಿಯಾ ಎದುರು ಅವರದ್ದೇ ಅಂಗಣದಲ್ಲಿ 2 ಬಾರಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮೆರೆದಿರುವ ಟೀಮ್ ಇಂಡಿಯಾ, ಇದೀಗ ಹ್ಯಾಟ್ರಿಕ್ ಸಾಧನೆಯ ಗುರಿ ಹೊತ್ತು 2024-25ರ ಸಾಲಿನ ಸರಣಿ ಆಡಲು ಸಜ್ಜಾಗುತ್ತಿದೆ.
ಈ ಸಲುವಾಗಿ ಹ್ಯಾಟ್ರಿಕ್ ಸಾಧನೆಯ ಗುರಿ ಹೊತ್ತಿರುವ ಭಾರತ ತಂಡಕ್ಕೆ ಇಬ್ಬರು ಸ್ಟಾರ್ ಬ್ಯಾಟರ್ಗಳ ಕೊರತೆ ಎದುರಾಗಿದೆ. ಕೆಳೆದ ಎರಡೂ ಸರಣಿ ಗೆಲುವಿನ ಹಿಂದೆ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಪಾತ್ರ ದೊಡ್ಡದು. ಆದರೆ, ಈಗ ಈ ಇಬ್ಬರೂ ಆಟಗಾರರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಇಲ್ಲವಾಗಿದೆ. ಟೀಮ್ ಇಂಡಿಯಾ ಸೆಲೆಕ್ಟರ್ಸ್ ಈ ಇಬ್ಬರು ಅನುಭವಿ ಬ್ಯಾಟರ್ಗಳ ಸ್ಥಾನಕ್ಕೆ ತೆಗೆದುಕೊಳ್ಳಬೇಕಾದ ಇಬ್ಬರು ಯುವ ಆಟಗಾರರನ್ನು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಸೂಚಿಸಿದ್ದಾರೆ.
19 ಶತಕಗಳು ಮತ್ತು 35 ಅರ್ಧಶತಕಗಳಿವೆ. 206 ರನ್ ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಮತ್ತೊಂದೆಡೆ ಆಡಿದ 85 ಟೆಸ್ಟ್ಗಳಲ್ಲಿ ಅಜಿಂಕ್ಯ ರಹಾನೆ 38.46ರ ಸರಾಸರಿಯಲ್ಲಿ 12 ಶತಕ ಮತ್ತು 26 ಅರ್ಧಶತಕಗಳೊಂದಿಗೆ ಅಜಿಂಕ್ಯ ರಹಾನೆ 5077 ರನ್ಗಳನ್ನು ದಾಖಲಿಸಿದ್ದಾರೆ. ಈ ಇಬ್ಬರೂ ಬ್ಯಾಟರ್ಗಳು ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದರು. ಕಳೆದ ಎರಡೂ ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಈ ಇಬ್ಬರ ಬ್ಯಾಟಿಂಗ್ ಪ್ರದರ್ಶನ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು.
“ಶುಭಮನ್ ಗಿಲ್ ಮತ್ತು ಸರ್ಫರಾಝ್ ಖಾನ್ ಇಬ್ಬರೂ ಕೂಡ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಈ ಇಬ್ಬರೂ ಆಟಗಾರರನ್ನು ಮುಂಬರು ಆಸ್ಟ್ರೇಲಿಯಾ ಪ್ರವಾಸಕ್ಕೂ ಆಯ್ಕೆ ಮಾಡುತ್ತಾರೆ ಅಂದುಕೊಂಡಿದ್ದೇನೆ. ಇವರಲ್ಲಿ ಅನುಭವಿಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರ ಸ್ಥಾನ ತುಂಬುವ ಸಾಮರ್ಥ್ಯವಿದೆ. ಯಶಸ್ಸು ಕಾಣುವ ಸಂಪೂರ್ಣ ಸಾಮರ್ಥ್ಯ ಅವರಲ್ಲಿದೆ,” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ