ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಪರಿಸ್ಥಿತಿಯನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದ್ದಾರೆ. ಹೀಗಾಗಿ ಅವರು ಬರ್ತ್ಡೇ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಇದು ಅಭಿಮಾನಿಗಳ ಬೇಸರ ಹೆಚ್ಚಿಸಿದೆ.
ಬರ್ತ್ಡೇ ದಿನ ಹೊಸ ಹೊಸ ಅಪ್ಡೇಟ್ಗಳನ್ನು ನೀಡುವ ಕೆಲಸ ಸಿನಿಮಾ ತಂಡಗಳಿಂದ ಆಗುತ್ತವೆ. ಅದೇ ರೀತಿ ‘ಹರಿಹರ ವೀರ ಮಲ್ಲು’, ‘ಒಜಿ’, ‘ಉಸ್ತಾದ್ ಭಗತ್ ಸಿಂಗ್’ ತಂಡಗಳು ಸೆಪ್ಟೆಂಬರ್ 2ರಂದು ಪೋಸ್ಟರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದವು. ಆದರೆ, ಈ ಯೋಜನೆ ಕ್ಯಾನ್ಸಲ್ ಆಗಿದೆ.
ಪವನ್ ಕಲ್ಯಾಣ್ ಜನ್ಮದಿನವನ್ನು ಫ್ಯಾನ್ಸ್ ಯಾವಾಗಲೂ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಪವನ್ ಅವರು ಉಪಮುಖ್ಯಮಂತ್ರಿ ಕೂಡ ಆಗಿದ್ದರು. ಹೀಗಾಗಿ ಸೆಲೆಬ್ರೇಷನ್ ಜೋರಾಗಿಯೇ ಇರಬೇಕಿತ್ತು. ಆದರೆ, ಪವನ್ ಕಲ್ಯಾಣ್ ಅವರು ಈ ಬಾರಿ ಸೆಲೆಬ್ರೇಷನ್ಗೆ ಬ್ರೇಕ್ ಹಾಕಿದ್ದಾರೆ.