ಚಿಕ್ಕಬಳ್ಳಾಪುರ :- ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ.
Hubballi: ಗುತ್ತಿಗೆದಾರರ ಬಾಕಿ ಮೊತ್ತ ತಡೆಯಿಡಿರಿ- ಜಮೀರ್ ಅಹ್ಮದ್ ಖಾನ್!
ಸ್ವಲ್ಪ ಯಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೂ ಯಾವುದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಇದ್ರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಬಂಡೆಯ ಕೆಳಗೆ ಸಾವಿರಾರು ಅಡಿ ಪಾತಾಳವಿದೆ, ಅಪ್ಪಿ ತಪ್ಪಿ ಮೇಲಿಂದ ಬಿದ್ದರೆ ಹೆಣ ಸಹ ಸಿಗದಷ್ಟು ದುರ್ಗಮ ಅರಣ್ಯ ಹಾಗೂ ಕಲ್ಲು ಬಂಡೆಗಳಿವೆ.
ಇನ್ನು ಜೋಡಿಗಳ ಕಥೆ ಹೇಳುವುದೇ ಬೇಡ, ಜೊತೆಗಾರ ಹತ್ತಿ ಇಳಿದ ಮೇಲೆ ತಾವು ಯಾರಿಗೇನೂ ಕಡಿಮೆ ಎಂದು ಇಲ್ಲಿಗೆ ಬರುವ ಯುವತಿಯರು ಹರಸಾಹಸ ಪಟ್ಟು ಎತ್ತರದ ಗ್ರೀಲ್ನಲ್ಲಿ ತೂರಿ ಇಳಿಯಲು ತಿಣುಕಾಡುತ್ತಾರೆ. ಈ ಹಿಂದೆ ಸಹ ಕೆಲವರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.
ರಮಣೀಯ ಪ್ರಕೃತಿ ಸೌಂದರ್ಯ ಸವಿಯಲು ಎಂದು ಬೆಟ್ಟಕ್ಕೆ ಬರುವ ಜೋಡಿಗಳು, ಆವುಲಬೆಟ್ಟದ ತುತ್ತ ತುದಿ ತಲುಪುತ್ತಿದ್ದಂತೆ, ಕೊಕ್ಕರೆಯಾಕಾರದ ಬಂಡೆಯನ್ನೇರಿ ಫೋಟೋ ವಿಡಿಯೋಗಾಗಿ ಸರ್ಕಸ್ ಮಾಡ್ತಿದ್ದಾರೆ. ಆಗಬಾರದ ಅನಾವುತಗಳು ಆಗುವುದಕ್ಕೂ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.