ಹುಬ್ಬಳ್ಳಿ: ಏಯ್ ಯಾಕ್ರೀ ಇಂಜಿನಿಯರ್? ಫಿನಿಶಿಂಗ್ ನೋಡ್ತೀ ಹೇಗಾಗಿದೆ? ಹೀಗೆನಾ ನೀವು ಕೆಲ್ಸ ಮಾಡೋದು?…
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಲ್ಲಿಯ ಮಂಟೂರ ರಸ್ತೆ ಬಳಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯವನ್ನು ವೀಕ್ಷಿಸಿದ ಬಳಿಕ ಹೀಗೆ ಪ್ರಶ್ನೆ ಮಾಡಿದರು.
Murder Case: ಫ್ಯಾನ್ಸ್ ಗಳಿಂದಲೇ ದರ್ಶನ್ಗೆ ಕಂಟಕ!? ಯಾಕೆ..? ಇಲ್ಲಿದೆ ಡೀಟೈಲ್ಸ್!
ಇದಕ್ಕೆ ಪ್ರತಿಯಾಗಿ ಕೋಪಗೊಂಡು ಪ್ರತಿಕ್ರಿಯಿಸಿದ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಆಯುಕ್ತರೇ ಈ ಇಂಜಿನಿಯರ್ ಅನ್ನು ಬೇರೆಕಡೆ ಕಳಿಸಿಬಿಡಿ. ಇವರು ಕೆಲಸ ಮಾಡಲು ಲಾಯಕ್ಕಿಲ್ಲ. ಬೇರೆ ಕಡೆ ಕೆಲಸ ಚೊಲೊ ಮಾಡ್ತಾನೆ. ಈ ಕೆಲಸ ಬೇಕಾಬಿಟ್ಟಿ ಮಾಡಿದಾನೆ. ಸಾಧ್ಯವಾದರೆ ಅಮಾನತು ಮಾಡಿಬಿಡಿ ಎಂದು ಸೂಚಿಸಿದರು.
ಸಚಿವ ಜಮೀರ್ ಅಹ್ಮದ್ ಅವರು, ಹೌದ್ರಿ ಅಲ್ಲಿ ಸಂಡೂರಲ್ಲಿ ನೋಡಿ. ಮನೆಗಳು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು. ಬೇಕಾಬಿಟ್ಟಿ ಯಾಕ್ರೀ ಕೆಲಸ ಮಾಡುತ್ತೀರಿ ಎಂದು ಇಇ ಸುರೇಶ ಹಿರೇಮಠ ವಿರುದ್ಧ ಹರಿಹಾಯ್ದರು.
ಇದರ ಗುತ್ತಿಗೆದಾರರಾದ ಮೇವರಿಕ್ ಹೋಲ್ಡಿಂಗ್ ಆ್ಯಂಡ್ ಇನ್ವೆಸ್ಟಮೆಂಟ್ಸ್ ಪ್ರೈ.ಲಿ. ಅವರಿಗೆ ಬಾಕಿ ಮೊತ್ತ ತಡೆಹಿಡಿಯಿರಿ. ಮನಸೋಇಚ್ಛೆ ಯಾಕೆ ಕೆಲಸ ಮಾಡಬೇಕು. ಬಡವರ ವಾಸ ಮಾಡುವ ಮನೆ ಅಷ್ಟೊಂದು ಕನಿಷ್ಠವೇ? ಮತ್ತೊಂದು ಕೊಳಗೇರಿ ಮಾಡಿದ್ದೀರಲ್ಲ? ಎಂದು ಗುತ್ತಿಗೆದಾರರನ್ನು ಪ್ರಶ್ನೆ ಮಾಡಿದರು.
ಭೇಟಿ ಮಾಡಿದ ಸ್ಥಳೀಯ ನಿವಾಸಿಗಳಿಗೆ ಜಮೀರ್ ಅಹ್ಮದ್ ಖಾನ್ ಅವರು, ನಿಮಗೆ ಒಂದು ತಿಂಗಳಲ್ಲಿ ಮನೆಗಳನ್ನು ಹಸ್ತಾಂತರ ಮಾಡುತ್ತೇವೆ. ಒಂದು ಪೈಸೆ ಕೂಡ ಕೊಡಬೇಡಿ ಎಂದು ಭರವಸೆ ನೀಡಿ ಸಮಾಧಾನ ಪಡಿಸಿದರು.
ಮಂಡಳಿ ಆಯುಕ್ತ ಅಶೋಕ ಡಿ.ಆರ್. ಇತರರು ಇದ್ದರು